AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ 50 ಸಂಭ್ರಮ.ಕಡೆಗಣನೆ..ಮೂಡಿಗೆರೆ. ಕನ್ನಡ ಸಾಹಿತ್ಯ ಪರಿಷತ್ತಿನ ಬಣಕಲ್ ಹೋಬಳಿ ಅದ್ಯಕ್ಷ ಬೆಟ್ಟಗೆರೆ ಲೊಕೇಶ್ ಅಕ್ರೋಶ

1 min read

ಕರ್ನಾಟಕ 50 ಸಂಭ್ರಮ.ಕಡೆಗಣನೆ..ಮೂಡಿಗೆರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಬಣಕಲ್ ಹೋಬಳಿ ಅದ್ಯಕ್ಷ ಬೆಟ್ಟಗೆರೆ ಲೊಕೇಶ್ ಅಕ್ರೋಶ

ಮೂಡಿಗೆರೆಯ ರಥಯಾತ್ರೆಯಲ್ಲಿ ಭಾಗವಹಿಸಿ ತಾಲೂಕು ಆಡಳಿತ ವ್ಯವಸ್ಥೆ ವಿರುದ್ಧ ಕೆಲವು ಸದಸ್ಯರು ವಿರೋಧ ಮಾಡಿದ್ದಾರೆ. ಕಾಲೇಜು ಮಕ್ಕಳನ್ನು ಕರೆಸಿಕೊಂಡು ಅವರಿಗೆ ಒಂದು ಕನ್ನಡ ಬಾವುಟ. ಕನ್ನಡ ಶಾಲು. ಮೆರವಣಿಗೆಯಲ್ಲಿ ಬರುವವರೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಮಕ್ಕಳು ಹಿಡೀ ಶಾಪ ಹಾಕಿದ್ದರೆ.
ಯಾವುದೇ ಸಂಭ್ರಮ ಇರಲಿಲ್ಲ. ಜಿಲ್ಲೆಯಿಂದ ಕಳಿಸಿದ ಕಲಾ ತಂಡ. ರಥದ ವಾಹನ ಬಿಟ್ಟರೆ ಬೇರೇನೂ ಇರಲಿಲ್ಲ. ಅಧಿಕಾರಿಗಳು ತಾಲೂಕಿನಲ್ಲಿ ಬಿಟ್ಟರೆ ಬೇರೆ ಕಡೆ ಮೊದಲೇ ಇರಲಿಲ್ಲ. ಶಾಸಕರು ಉದ್ಘಾಟಿಸಿದ ನಂತರ ಎಲ್ಲಾ ಅಧಿಕಾರಿಗಳು ಮಾಯ.
ಇದು ಮೂಡಿಗೆರೆಯ ತಾಲೂಕು ಆಡಳಿತ ವ್ಯವಸ್ಥೆಗೆ ಹಿಡಿದ ಕೈ ಕನ್ನಡಿ.
ತಾಲೂಕು ಆಡಳಿತ ವೈಫಲ್ಯ ದಿಂದ ಬಣಕಲ್.ಗೊಣೀಬೀಡು. ಹೋಬಳಿ ವ್ಯಾಪ್ತಿಯಲ್ಲಿ ಸಂಭ್ರಮ ಇಲ್ಲದೇ ರಥಯಾತ್ರೆ.
ತಾಲೂಕು ಆಡಳಿತ ಯಾವುದೇ ತಯಾರಿ ಇಲ್ಲದೇ ಕಾಟಾಚಾರಕ್ಕೆ ಕರ್ನಾಟಕ 50 ಸಂಭ್ರಮ ಮಾಡಿದೆ. ಸಂಭ್ರಮಿಸಲು ಮಕ್ಕಳು. ಸಂಘ ಸಂಸ್ಥೆಗಳು..ಸ್ಥಳೀಯ ಜನ ಪ್ರತಿನಿಧಿಗಳು ಇಲ್ಲದೆ. ಕೆಲವು ಅಧಿಕಾರಿಗಳು ಮಾತ್ರ ಸರ್ಕಾರದ ಹಣದಲ್ಲಿ ಸಂಭ್ರಮಿಸಿದರು. ಅಷ್ಟೇ. ಜನರಿಗೆ ಅರಿವು ಮೂಡಿಸದೇ. ಸಂಘ ಸಂಸ್ಥೆಗಳನ್ನು ಅವರ ಆದೇಶದಲ್ಲಿ ಮಾತ್ರ ಸೇರಿಸಿ ಯಾರಿಗೂ ತಿಳಿಸದೆ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ರಥಯಾತ್ರೆ ಸಾಗಿದ್ದು ನಮ್ಮ ಮೂಡಿಗೆರೆ ತಾಲ್ಲೂಕಿನ ದುರಂತ.
ಸರ್ಕಾರದ ಕಾರ್ಯಕ್ರಮ ಅದರಲ್ಲೂ ಬಾಷೆಯ ಕಾರ್ಯಕ್ರಮಕ್ಕೆ ಈ ರೀತಿಯ ಅಪಚಾರ ಸರಿ ಅಲ್ಲ ಎಂದರು.ಸರಿಯಾದ ಆಡಳಿತ ವ್ಯವಸ್ಥೆ ಮಾಡಲು ಆಗದ ಅಧಿಕಾರಿಗಳನ್ನು ಖಂಡಿಸುತ್ತೇವೆ ಎಂದು ಸಂಸ್ಥೆಯ ಅದ್ಯಕ್ಷ ಲೊಕೇಶ್. ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *