ವಿದ್ಯುತ್ ಪ್ರವಹಿಸಿ ರೈತ ಸಾವು : ಮೂಡಿಗೆರೆ ತಾಲ್ಲೂಕು ಕುಂದೂರು ಕಾರ್ಲಗದ್ದೆಯಲ್ಲಿ ದುರ್ಘಟನೆ
1 min read
ವಿದ್ಯುತ್ ಪ್ರವಹಿಸಿ ರೈತ ಸಾವು : ಮೂಡಿಗೆರೆ ತಾಲ್ಲೂಕು ಕುಂದೂರು ಕಾರ್ಲಗದ್ದೆಯಲ್ಲಿ ದುರ್ಘಟನೆ
🔹🔹🔹🔹🔹
ಭತ್ತದ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕಿನ ಕುಂದೂರು ಸಮೀಪದ ಕಾರ್ಲಗದ್ದೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಾರ್ಲಗದ್ದೆ ಗ್ರಾಮದ ಕೃಷಿಕ ಸತೀಶ್ ಶೆಟ್ಟಿ (45 ವರ್ಷ) ಎನ್ನುವರು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ದುರ್ದೈವಿ.
ಇಂದು ಗುರುವಾರ ಮುಂಜಾನೆ ಎಂದಿನಂತೆ ಗದ್ದೆಗೆ ತೆರಳಿದ್ದ ವೇಳೆ ವಿದ್ಯುತ್ ಪ್ರವಹಿಸಿ ಸತೀಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಧ್ಯಾಹ್ನದ ಹೊತ್ತಿಗೆ ಸತೀಶ್ ಮೃತಪಟ್ಟಿರುವ ವಿಷಯ ಕುಟುಂಬದವರಿಗೆ ತಿಳಿದಿದೆ.
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.