AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ:22/09/2024 ರ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕದ ವತಿಯಿಂದ…

1 min read

*💐 ದಿನಾಂಕ:22/09/2024 ರ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕದ ನೂತನ ಅಧ್ಯಕ್ಷರು , ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಹಮ್ಮಿಕೊಳ್ಳಲಾಗಿದೆ. ಈ ಪದಗ್ರಹಣ ನಿಮಿತ್ತ ಮೂಡಿಗೆರೆಯ ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡುವುದರೊಂದಿಗೆ ಪ್ರೌಢಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ “ಅಂದವಾದ ಕನ್ನಡ ಕೈಬರಹ✍️📖 ಸ್ಪರ್ಧೆ ✍️📖” ಹಮ್ಮಿಕೊಳ್ಳಲಾಯಿತು. ಕಸಬಾ ಕನ್ನಡ ಸಾಹಿತ್ಯ ಪರಿಷತ್ತಿನ ಈ ಸ್ಪರ್ಧೆಯಲ್ಲಿ ಮೂಡಿಗೆರೆ ನಗರದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಕಾಲೇಜು, ನಳಂದ, ಬೆಥನಿ, ಬಿ.ಜಿ.ಎಸ್.ವಿ.ಎಸ್ ಪಿ.ಯು ಕಾಲೇಜು, ಎಂ.ಇ.ಎಸ್ ಪ್ರೌಢಶಾಲಾ ಮಕ್ಕಳು,ಜೆ.ಎಸ್.ಶಾಲಾ ಮಕ್ಕಳು ಅಂದವಾದ ಕನ್ನಡ ಕೈಬರಹ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಯಶಸ್ವಿಗೊಳಿಸಿದರು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತಿ ಶಾಲೆ ಹಾಗೂ ಕಾಲೇಜುಗಳ ತಲಾ ಮೂರು ಜನರಿಗೆ ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಗ್ರಹಣ ಕಾರ್ಯಕ್ರಮದಲ್ಲಿ ಅಭಿನಂದಿಸಿ ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಆಯಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ನಿಯೋಜಿತ ಅಧ್ಯಕ್ಷರಾದ ರವಿ ಕುನ್ನಳ್ಳಿ, ನಿಕಟಪೂರ್ವ ಅಧ್ಯಕ್ಷರಾದ ಎಂ.ಎಸ್.ನಾಗರಾಜ್, ಗೌರವ ಕಾರ್ಯದರ್ಶಿ ಬಿ.ಆರ್.ನವೀನ್, ಕೋಶಾಧ್ಯಕ್ಷರಾದ ಹಸೈನಾರ್ ಬಿಳಗುಳ, ರಕ್ಷಿತ್, ಜಗದೀಶ್ ಗಂಗನಮಕ್ಕಿ, ಶ್ರೀಧರಾಚಾರ್, ಅಶೋಕ್ , ಯಾಕೂಬ್, ವಿದ್ಯಾ , ನಿಶಾಂತ್. ಇತರರು ಉಪಸ್ಥಿತರಿದ್ದರು.*💐

About Author

Leave a Reply

Your email address will not be published. Required fields are marked *