ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಚತಾ ಆಂದೋಲನ
1 min read
ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿಗಳು ಸೇರಿದಂತೆ ಸೇವಭಾರತಿ ಸಂಘದ ಸದಸ್ಯರು ಮತ್ತು ವಿವಿಧ ಮಹಿಳಾ ಸಂಘಗಳ ಸಕ್ರೀಯ ಸದಸ್ಯರು ಪಾಲ್ಗೊಂಡಿದ್ದರು.
ದೀಪ ಬೆಳಗುವ ಮೂಲಕ ಬಣಕಲ್ ಹೈಸ್ಕೂಲ್ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಮತ್ತು ಡಾಕ್ಟರ್ ನವೀನ್ ಆವರು ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್.ಎಂ. ಆಶ್ರಿತ್ ಗೌಡ ಮಾತನಾಡಿ ಗ್ರಾಮದ ಹಲವು ಸಮುದಾಯ ಭವನಗಳಲ್ಲಿ ಗ್ರಾಮದ ಸ್ನೇಹಿತರೂ ಸೇರಿ ಗಣಪತಿ ಪ್ರತಿಷ್ಠಾಪಿಸಿದ್ದೇವೆ.
ಈ ಹಬ್ಬವನ್ನ ವಿಶೇಷವಾಗಿ ಆಚರಿಸುವ ಸಲುವಾಗಿ ಸ್ವಚ್ಚತಾ ಚಟುವಟಿಕೆ ಮಾಡಲು ಮುಂದಾಗಿದ್ದೇವೆ.
ಇದೇ ಸಂದರ್ಭದಲ್ಲಿ ಸ್ನೇಹಿತರ ಸಹಾಯದಿಂದ ಬಸ್ ಸ್ಟಾಪ್ ಗಳಿಗೆ ಬಣ್ಣ ಹೊಡೆಯುವುದು ಸೇರಿದಂತೆ ರಿಪೇರಿ ಕೆಲಸವನ್ನು ಮಾಡುತಿದ್ದೇವೆಂದು ತಿಳಿಸಿದರು
ಗ್ರಾಮಸ್ಥರಾದ ಹೆಚ್.ಜಿ. ಆದರ್ಶ್ . ರವಿಶಂಕರ್. ಶಶಿಕಾಂತ್. ಚಂದ್ರಶೇಖರ್. ರಮೇಶ್. ಧ್ರುವ. ಧನಂಜಯ. ಹರೀಶ್. ಸದನ್. ಪ್ರತಾಪ್.ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು