ಮೂಡಿಗೆರೆ :-ಜೇಸಿಐ ಗೋಣಿಬೀಡು ಹೊಯ್ಸಳ ಜೇಸಿ ಸಪ್ತಾಹ -24ರ ಉದ್ಘಾಟನೆ.
1 min read
ಮೂಡಿಗೆರೆ :-ಜೇಸಿಐ ಗೋಣಿಬೀಡು ಹೊಯ್ಸಳ ಜೇಸಿ ಸಪ್ತಾಹ -24ರ ಉದ್ಘಾಟನೆ.
ಜೇಸಿಐ ಹಲವಾರು ಯುವಕರಿಗೆ ದಾರಿ ದೀಪವಾಗಿದೆ. ಹೆಚ್.ಜಿ.ಆದರ್ಶ್.
ಮೂಡಿಗೆರೆ :-ಜೇಸಿಐ ಸಂಸ್ಥೆಯು ಒಂದು ಉತ್ತಮ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿರುತ್ತದೆ ಮತ್ತು ಹಲವಾರು ಯುವಕರಿಗೆ ದಾರಿ ದೀಪ ವಾಗಿದೆ ಎಂದು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆ ಯ ಅಧ್ಯಕ್ಷರಾದ ಹೆಚ್. ಜಿ. ಆದರ್ಶ್ ಹೇಳಿದರು.
ಅವರು ಇಂದು ಗೋಣಿಬೀಡು ಹೊಯ್ಸಳ ವತಿಯಿಂದ ಜೇಸಿ ಸಪ್ತಾಹ-24.ಸಾಧನೆ ಮಾಡಿದ ಬಿ.ಕೆ.ಚಂದ್ರಶೇಖರ್ ರವರಿಗೆ ಅಭಿನಂದನೆಹಾಗೂ ವೃದ್ದಾಶ್ರಮ ದಲ್ಲಿ ಯೋಗ ಅಭ್ಯಾಸ ಮತ್ತು ಫುಡ್ ಕಿಟ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂಸ್ಥೆಯ ಗೋಣಿಬೀಡು ಪರಿಸರ ದಲ್ಲಿ ಹಲವಾರು ಉತ್ತಮ ಸಮಾಜ ಮುಖಿ ಕಾರ್ಯಕ್ರಮ ವನ್ನು ಮಾಡುವ ಮೂಲಕ ಪ್ರಸಂಸೆ ಪಡೆದಿದೆ ಎಂದರು..
ನಿಕಟಪೂರ್ವ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್ ಮುಖ ಅತಿಥಿ ಗಳಾಗಿ ಮಾತನಾಡುತ್ತಾ ಸಮಾಜ ಮುಖಿ ಕಾರ್ಯ ಗಳಲ್ಲಿ ಯುವ ಜನತೆ ಸಕ್ರಿಯ ವಾಗಿ ತೊಡಗಿಸಿ ಕೊಳ್ಳುವಲ್ಲಿ ಪ್ರೋತ್ಸಾಹ ನೀಡುವ ಕಾರ್ಯ ವಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಕೆ.ಚಂದ್ರಶೇಖರ್. ಜೇಸಿ ಎಲ್ಲಾ ಸದಸ್ಯ ರಿಗೆ ಅಭಿನಂದನೆಗಳು ಮತ್ತು ಇದರೊಂದಿಗೆ ಯುವಕರಿಗೆ ಸಕಾರಾತ್ಮಕ ಬದಲಾವಣೆ ತರುವಲ್ಲಿ ಜೇಸಿ ಸಂಸ್ಥೆ ಪಾತ್ರ ಹಿರಿದಾಗಿರಬೇಕೆಂದು ಅಭಿಪ್ರಾಯಪಟ್ಟರು.
ಜೇಸಿ ಸತ್ಯಕುಮಾರ್ ಪ್ರಸ್ತಾವಿಕ ವಾಗಿ ಮಾತನಾಡಿದರು
ರಂಜಿತ್.ಜೇಸಿ ವಾಣಿ ಪ್ರಸ್ತುತ ಪಡಿಸಿದರು.ಕಾರ್ಯದರ್ಶಿ
ಜಗತ್ ಬಿ.ಎಂ ವಂದಿಸಿದರು.ಪೂರ್ವಧ್ಯಕ್ಷ ರಾದ ಎಂ.ಸಿ.ಗಣೇಶ ಗೌಡ. ವೈ ಬಿ. ಸುಂದ್ರೇಶ್.ಉದಯ್ ಕಸ್ಕಬೈಲ್.ಸುನಿಲ್.ರಮೇಶ್.ಮುಂತಾದವರು ಉಪಸ್ಥಿತರಿದ್ದರು.