AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರ ನಿಷ್ಕ್ರಿಯ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆರೊಪ.

1 min read

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರ ನಿಷ್ಕ್ರಿಯ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆರೊಪ.
ಯೋಜನೆಗಳ ಬಗ್ಗೆ ಮಾತ್ರ ಗಮನಹರಿಸುತಿದೆ.
ಮಹಿಳೆಯರ ಬಗ್ಗೆ ಸುರಕ್ಷಿತೆ ಇಲ್ಲದಿರುವುದು.
ಕಾಡಾನೆಗಳ ಹಾವಳಿ ಬಗ್ಗೆ ಶಾಶ್ವತ ಪರಿಹಾರ ಇಲ್ಲದಿರುವುದು.
ಸರ್ಕಾರ ಸರ್ಫ಼ೆಸಿ ಕಾಯ್ದೆ ಬಗ್ಗೆ ಸರ್ಕಾರ ರೈತರ ಬಗ್ಗೆ ಮುತುವರ್ಜಿ ಮಾಡದಿರುವುದು.
ಕಚೇರಿಗಳಲ್ಲಿ ಕಡತಗಳ ವಿಲೆವಾರಿ ಸಮರ್ಪಕವಾಗಿ ಅಗದಿರುವುದು.
ಗೋವುಗಳ ಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ.
ರಸ್ತೆ ವಿಚಾರದದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಕಾಯಿದೆಗೆ ರಾಜ್ಯ ಸರ್ಕಾರ ಸ್ಪಂದಿಸದೆ ಇರುವುದು.
ಬತ್ತ ಬೆಳೆಯಲು ರೈತರಿಗೆ ಎಕ್ಕರೆಗೆ 15000/-ನೀಡಿ ಕೃಷಿಯನ್ನು ಬೆಂಬಲಿಸಬೇಕು.
ಮೂಡಿಗೆರೆ ಪಟ್ಟಣದಲ್ಲಿ ಪಾದಚಾರಿಗಳಿಗೆ ತಿರುಗಾಡಲು ಅನಾನುಕೂಲ ಅಗಿರುವ ಬಗ್ಗೆ ಜನಪ್ರತಿನಿದಿಗಳು ಗಮನ ಹರಿಸದೆ ಇರುವುದು.
ಕಳಸವನ್ನು ತಾಲೂಕು ಕೇಂದ್ರಮಾಡಿದ್ದು ಇದುವರೆಗೆ ಸಮರ್ಪಕವಾದ ಮೂಲಭೂತ ಸೌಕರ್ಯಗಳನ್ನು ನೀಡದೆ ಇರುವುದು.
ಇವೆಲ್ಲ ಸಮಸ್ಸೆಗಳಬಗ್ಗೆ ಸರ್ಕಾರ ಕೂಡಲೆ ಗಮನ ಹರಿಸಿ ಪರಿಹರಿಸ ಬೇಕು ಇಲ್ಲದಿದ್ದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ನ್ನು ಸೇರಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಕಾರ್ಯದ್ಯಕ್ಷರಾದ ಬಿ.ಸಿ.ದಯಾಕರ ವಾಹಿನಿಯೊಂದಿಗೆ ಮಾತಾಡುತ್ತ ತಿಳಿಸಿದರು.
ಜೊತೆಯಲ್ಲಿ ಚಿಕ್ಕಮಗಳೂರು ತಾಲೂಕು ಅದ್ಯಕ್ಷರಾದ ತುಳಸೆಗೌಡ.ಜಿಲ್ಲಾ ಸಂಚಾಲಕರಾದ ಡಿ.ಎಸ್.ರಮೇಶ್. ಇದ್ದರು.

 

About Author

Leave a Reply

Your email address will not be published. Required fields are marked *