ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಕರ್ನಾಟಕ ನಡೆಸುವ ಉನ್ನತ ಪರೀಕ್ಷೆಯಾದ ರಾಜ್ಯ ಪುರಸ್ಕಾರ ಪರೀಕ್ಷೆಯ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು
1 min read
ದಿನಾಂಕ 21/06/2024 ರಂದು ಮೂಡಿಗೆರೆಯ ಸಂತ ಮಾರ್ಥಸ್ ಪ್ರೌಢಶಾಲಾ ಆವರಣದಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಕರ್ನಾಟಕ ನಡೆಸುವ ಉನ್ನತ ಪರೀಕ್ಷೆಯಾದ ರಾಜ್ಯ ಪುರಸ್ಕಾರ ಪರೀಕ್ಷೆಯ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು
ಈ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ತಾಲೂಕಿನ ಹಲವು ಶಾಲೆಯ ಸುಮಾರು 55 ವಿದ್ಯಾರ್ಥಿಗಳು ಭಾಗವಹಿಸಿದ್ದರು ಬೆಳಗ್ಗೆ ನೋಂದಣಿಯೊಂದಿಗೆ ಪ್ರಾರಂಭವಾದ ಪರೀಕ್ಷಾ ಶಿಬಿರವು ತಾಲೂಕು ಹಾಗೂ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ಧ್ವಜ ಆರೋಹಣವು ಶಾಲಾ ಆವರಣದಲ್ಲಿ ನೆರವೇರಿತು ವಿದ್ಯಾರ್ಥಿಗಳಿಗೆ ಜಿಲ್ಲಾ ಸಂಸ್ಥೆಯಿಂದ ಸಿದ್ಧಪಡಿಸಿದಂತಹ ಪ್ರಶ್ನೆ ಪತ್ರಿಕೆಯೊಂದಿಗೆ ಲಿಖಿತ ಪರೀಕ್ಷೆಯನ್ನು ಮಾಡಲಾಯಿತು ತದನಂತರ ರಾಜ್ಯ ಪುರಸ್ಕಾರಕ್ಕೆ ಬೇಕಾದಂತಹ ಎಲ್ಲಾ ವಿಧವಾದ ಪರೀಕ್ಷೆಗಳನ್ನು ಮಾಡಿ ಸಂಜೆ 4 ಗಂಟೆಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು ಈ ಒಂದು ದಿನದ ಪೂರ್ವ ಸಿದ್ಧತಾ ಪರೀಕ್ಷೆ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡಿಗೆರೆ ಅಧ್ಯಕ್ಷರಾದಂತಹ ಮಗ್ಗಲಮಕ್ಕಿ ಗಣೇಶ್ ಜಿಲ್ಲಾ ಸಂಘಟಕರಾದಂತಹ ಕಿರಣ್ ಕುಮಾರ್ ಹಾಗೂ ನಿಹಾಲ್ ಹಾಗೂ ಮೂಡಿಗೆರೆ ತಾಲೂಕಿನ ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿಗಳಾದ ರಕ್ಷಿತ್ ಬಾಳೂರು ಹಾಗೂ ಕೋಶಾಧಿಕಾರಿಗಳಾದ ಬಸವರಾಜು ಹಾಗೂ ಪದಾಧಿಕಾರಿಗಳಾದ ಶ್ರೀ ರಾಘವೇಂದ್ರ ಶಾಂತಕುಮಾರ್ ದಂಡಾವತಿ ಜಯಪಾಲ್ ಜೆಪಿ ಶ್ರೀಮತಿ ನಯನ ಶಾಲೆಯ ಮುಖ್ಯೋಪಾಧ್ಯಯರಾದ ಸಹೋದರಿ ಶಾರ್ಲೆಟ್ ಭಾಗವಹಿಸಿದ್ದರು….