“ಅಪಘಾತದಲ್ಲಿ ಯುವಕ ಪ್ರಾಣಾಪಾಯದಿಂದ ಪಾರು : ಮೂಡಿಗೆರೆ ಕಾಫಿನಾಡು ಸಮಾಜ ಸೇವಾ ಸಂಘದಿಂದ ಸಹಾಯ ಹಸ್ತ.”
1 min read
ದಿನಾಂಕ 20/04/2024ರ ಶನಿವಾರ ರಾತ್ರಿ 9:00ಗಂಟೆಗೆ ಮೂಡಿಗೆರೆಯ ಜನ್ನಾಪುರ ಬಳಿ ಮಂಗಳೂರು ಮೂಲದ ಆರಾಫ಼ತ್ ಎಂಬ ಯುವಕ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾಡುತಿದ್ದ.
ಜನ್ನಾಪುರದಿಂದ ಮೂಡಿಗೆರೆಯ ಕಡೆಗೆ ಸ್ವಲ್ಪ ದೂರದಲ್ಲಿ ಈ ಅಪಘಾತ ಸಂಭವಿಸಿದೆ.(KA 19 MJ 2523)
ರಸ್ತೆಯ ಬದಿಗೆ ಮಣ್ಣು ಹಾಕಿದ್ದು ನಿನ್ನೆ ರಾತ್ರಿ ಬಹಳ ಮಳೆ ಬಂದಿದ್ದರಿಂದ ಚಾಲಕನಿಗೆ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಹೊಡೆದು ಪಲ್ಟಿ ಅಗಿದೆ.
ಪ್ರಾಣಾಪಾಯದಿಂದ ಚಾಲಕ ಪಾರಾಗಿದ್ದಾನೆ.
ಕೂಡಲೆ ಸ್ಥಳಕ್ಕೆ ಬಂದ ಕಾಫಿನಾಡು ಸಮಾಜ ಸೇವಾ ಸಂಘದ ಅಧ್ಯಕ್ಷ ಹಸೈನಾರ್ ಬಿಳಗುಳ,ಬಕ್ಕಿಮಂಜು, ವಸಂತ್ ಹಾರ್ಗೋಡು ಚಾಲಕನಿಗೆ ಪ್ರಥಮ ಚಿಕಿತ್ಸೆ ಮಾಡಿದರು.
ಜೆಸಿಬಿ ಸಹಾಯದಿಂದ ಕಾರನ್ನು ಮೆಲಕ್ಕೆತ್ತಿ ನಂತರ ಟೊಯಿಂಗ್ ವಾಹನ ತರಿಸಿ ಕಳಿಸಿಕೊಡಲಾಯಿತು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.