ಹಣ, ಹೆಂಡ ಇನ್ನಿತರ ಆಮಿಷಗಳನ್ನು ಹಂಚದಿದ್ದರೆ ಜನ ಓಟು ಕೊಡಲ್ಲ ಎಂದು ಸುದ್ಧಿ ಹಬ್ಬಿಸಿ, ಸೋಲಿನ ಭಯ ಹುಟ್ಟಿಸುವುದು ಅಭ್ಯರ್ಥಿಯ ಸಮೀಪವರ್ತಿಗಳೇ….
1 min read
ಹಣ, ಹೆಂಡ ಇನ್ನಿತರ ಆಮಿಷಗಳನ್ನು ಹಂಚದಿದ್ದರೆ ಜನ ಓಟು ಕೊಡಲ್ಲ ಎಂದು ಸುದ್ಧಿ ಹಬ್ಬಿಸಿ, ಸೋಲಿನ ಭಯ ಹುಟ್ಟಿಸುವುದು ಅಭ್ಯರ್ಥಿಯ ಸಮೀಪವರ್ತಿಗಳೇ.
ಯಾಕೆಂದರೆ ಇವೆಲ್ಲದರ ಅಗತ್ಯವಿರುವುದು ಆ ಸಮೀಪವರ್ತಿಗಳಿಗೇ.
ಈ ಉಮೇದುವಾರನನು ಈಗ ಬಿಟ್ಟರೆ ಮತ್ತೆ ಸಿಕ್ಕ ಎಂದು ಕಿತ್ತು ಕೊಡುವ ನೆಪದಲ್ಲಿ ತಾವೇ ಕಿತ್ತುಬಿಡುತ್ತಾರೆ.
ಹೆಸರು ಮತದಾರರದ್ದು, ಜೇಬು, ಹೊಟ್ಟೆ ಈ ಪರತಂತ್ರಿಗಳದ್ದು.
ನನ್ನ ಕಡೆಯ ಇಷ್ಟು ಓಟುಗಳು ಪಕ್ಕಾ,
ಆದರೆ ಇಂತಿಂಥದನ್ನ ಕೊಡಬೇಕಾಗುತ್ತೆ ಎಂದು ಅಭ್ಯರ್ಥಿಯನು ಯಾಮಾರಿಸಿ ಯಲ್ಲಮ್ಮನ ಜಾತ್ರೆ ಏರ್ಪಡಿಸಿ, ಮುಂದಿನ ಚುನಾವಣೆಯ ವರೆಗೆ ಬೇಕಾಗುವಷ್ಟು ಗಂಟು ಮಾಡಿಕೊಳ್ಳುವ ಕಾರಸ್ತಾನವಿದು.
ಹಾಗಾಗಿಯೇ ಮತದಾನದ ಹಿಂದಿನ ದಿನಗಳಲಿ ಇವರು ಹೆಚ್ಚು ಚುರುಕಾಗಿಬಿಡುತ್ತಾರೆ.
ದುಡ್ಡು ಕೊಡಿಸಿ ಓಟು ಹಾಕಿಸಿ ಗೆಲ್ಲಿಸುತ್ತೇವೆ ಎನ್ನುವ ಈತರುಗಳು ಯಾವ ಸೀಮೆ ಕಾರ್ಯಕರ್ತರು, ಜನಸ್ನೇಹಿಗಳು ಹಾಗೂ ನಾಯಕರುಗಳು???
ತಮ್ಮ ವಯಕ್ತಿಕ ಸಾಧನೆ, ವರ್ಚಸ್ಸು ಹಾಗೂ ಜನಬಳಕೆಯ ವಿಶ್ವಾಸದಿಂದ ಓಟು ಕೊಡಿಸಲಾಗದ ಇವರು ಸಾರ್ವಜನಿಕ ಸೇವೆಯಲ್ಲಿರುವ ಜನಸೇವಕರಾ???
ಈ ಸಂದೇಶ ನೇರವಾಗಿ ಚುನಾವಣೆಯಲಿ ಅಭ್ಯರ್ಥಿಗಳಾಗಿರುವವರಿಗೆ ತಲುಪಬೇಕು.