ಲೋಕ ಸಮರಕ್ಕೆ ಗಜಪಡೆಯಿಂದ ಮತ ಭೇಟೆ”
1 min read
“ಲೋಕ ಸಮರಕ್ಕೆ ಗಜಪಡೆಯಿಂದ ಮತ ಭೇಟೆ”
ಮೂಡಿಗೆರೆ ಬಿ ಎಸ್ ಪಿ ವತಿಯಿಂದ ಮೂಡಿಗೆರೆ ಕ್ಷೇತ್ರದಲ್ಲಿ ಬಿರುಸಿನ ಮತ ಪ್ರಚಾರಕ್ಕೆ ರಾಜ್ಯ, ಜಿಲ್ಲಾ,ಬಿ ಎಸ್ ಪಿ ಯ ನಾಯಕರೆ ತಾಲ್ಲೂಕಿನ ಮುಖಂಡರ ಜೊತೆಗೆ ಹಳ್ಳಿಗೆ ಇಳಿದು ಬಿರುಸಿನ ಪ್ರಚಾರಕ್ಕೆ ನಿಂತಿರುವುದು ಈ ಭಾಗದ ಮತದಾರರನ್ನು ಸೆಳೆಯುತ್ತಿರುವುದು ಕಣದಲ್ಲಿ ಸಂಚಲನ ಮೂಡಿಸುತ್ತಿದೆ..
ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೆ ಟಿ ರಾಧಾಕೃಷ್ಣ ರವರ 40ವರ್ಷದ ಎಲ್ಲ ಜನರಿಗೆ ಮಾಡಿರುವ ಸೇವೆ ಮತ್ತು ಕಾರ್ಯವನ್ನು ಜನರ ಮುಂದಿಟ್ಟು ಬಿಜೆಪಿಯ ಸಂವಿಧಾನ ವಿರೋಧಿ ನೀತಿಯನ್ನು ಹಾಗೂ ಕಾಂಗ್ರೇಸ್ ನ ಅಧಿಕಾರ ವೈಫಲ್ಯವನ್ನು ಜನರಿಗೆ ತಿಳಿಸುವ ಮೂಲಕ ಮತ ಕೇಳುತ್ತಿರುವುದು ಅಖಾಡದಲ್ಲಿರುವ ಪಕ್ಷಗಳಿಗೆ ನಡುಕ ಉಂಟು ಮಾಡಿದೆ.