ಬ್ರಹ್ಮಶ್ರೀ ನಾರಾಯಣ ಗುರು ಮಲೆಯಾಳಂ ಸೇವಾ ಸಮಾಜ ಶಕ್ತಿ ಘಟಕ. ಹ್ಯಾಂಡ್ ಪೋಸ್ಟ್ ಇದರ 2ನೇ ವಾರ್ಷಿಕೋತ್ಸವ ಸಮಾರಂಭ.
1 min readದಿನಾಂಕ 10.03.2024ರ ಭಾನುವಾರದಂದು ಮುತ್ತಿಗೆಪುರ ಸಮುದಾಯ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಲೆಯಾಳಂ ಸೇವಾ ಸಮಾಜ ಶಕ್ತಿ ಘಟಕ ಹ್ಯಾಂಡ್ ಪೋಸ್ಟ್ ಇದರ 2ನೇ ವಾರ್ಷಿಕೋತ್ಸವ ಸಮಾರಂಭ ನಡೆಸಲಾಯಿತು.
ಸಮಾರಂಭವನ್ನು ದೀಪ ಬೆಳಗಿಸುವ ಮುಖಾಂತರ ಉದ್ಘಾಟನೆ ಮಾಡಲಾಯಿತು. ಮೂಡಿಗೆರೆ ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಸಿ. ವಿ. ಮಹೇಶ್ ಅವರು ಮಾತನಾಡಿ ಪ್ರತಿ ಘಟಕದಲ್ಲಿ ಇಂತಹ ಕಾರ್ಯಕ್ರಮ ನಡೆಯಬೇಕು ಮಲೆಯಾಳಂ ಸಮುದಾಯದ ಇನ್ನಷ್ಟು ಕುಟುಂಬಗಳು ಇದರೊಂದಿಗೆ ಕೈ ಜೋಡಿಸಿ ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಬಿಳಗುಳ ಘಟಕದ ಅಧ್ಯಕ್ಷರಾದ ದಾದಾಮಣಿ ಮಾತನಾಡಿ ನಮ್ಮ ಸಂಸ್ಕೃತಿ ಯನ್ನು ನಮ್ಮ ಮಕ್ಕಳಿಗೆ ಹೇಳಿಕೊಡುವುದರ ಮೂಲಕ ಮೂಲ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು. ಬಿಳುಗುಳ ಘಟಕದ ಉಪಾಧ್ಯಕ್ಷ ಬಾಲುರವರು ಸಭೆಯನ್ನು ಉದ್ದೇಶಿಸಿ ಹಿತನುಡಿಗಳನ್ನು ಆಡಿದರು.
ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು ಹಾಗೆ ಮಹಿಳೆಯರಿಗೆ, ಮಕ್ಕಳಿಗೆ, ಪುರುಷರಿಗೆ ಆಟೋಟ ಸ್ಪರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಸಮಿತಿಯ ಗೌರವ ಅಧ್ಯಕ್ಷ ಮೋಹನ್, ತಾಲ್ಲೂಕು ಅಧ್ಯಕ್ಷ ಸಿ. ವಿ. ಮಹೇಶ್, ಉಪಾಧ್ಯಕ್ಷ ಜಗನ್ ಮೋಹನ್, ಕಾರ್ಯದರ್ಶಿ ಪ್ರವೀಣ್, ಸಹಕಾರ್ಯದರ್ಶಿ ರಾಜೇಶ್, ಬಿಳಗುಳ ಘಟಕದ ಅಧ್ಯಕ್ಷ ದಾದಾ ಮಣಿ, ಉಪಾಧ್ಯಕ್ಷ ಬಾಲು, ಬಣಕಲ್ ಘಟಕದ ಅಧ್ಯಕ್ಷ ರಾಮಚಂದ್ರ, ಘಟ್ಟದಳ್ಳಿ ಘಟಕದ ಅಧ್ಯಕ್ಷ ಅನಿಶ್, ಕುನ್ನಳ್ಳಿ ಘಟಕದ ಕಾರ್ಯದರ್ಶಿ ಸಾಯಿಸುರೇಶ್, ಗೋಣಿಬೀಡು ಘಟಕದ ಉಪಾಧ್ಯಕ್ಷ ರವಿ,
ಶಕ್ತಿ ಘಟಕದ ಅಧ್ಯಕ್ಷ ಆನಂದ್, ಉಪಾಧ್ಯಕ್ಷ ಚಿದಂಬರ್, ಕಾರ್ಯದರ್ಶಿ ಮಂಜುನಾಥ್, ಸಹಕಾರ್ಯದರ್ಶಿ ಸಾಗರ್, ಖಜಾಂಚಿ ಸತೀಶ್, ಕಾರ್ಯಧ್ಯಕ್ಷ ವಾಸು, ಸಂಘಟನೆ ಕಾರ್ಯದರ್ಶಿ ಪ್ರಕಾಶ್,ಸದಸ್ಯರಾದ ಅನಿಲ್, ವಿಜಯ್, ವಿನಯ್, ಕೃಷ್ಣಾ,ಅಭಿಲಾಷ್, ಅರುಣ್,ರಾಜೀವ್, ಕುಟ್ಟಿ ಕೃಷ್ಣ, ಚಂದ್ರ, ಅವಿನಾಶ್, ಶಶಿ,ಪ್ರದೀಪ್, ಭುವಿತ್, ಉಷಾಪ್ರಭಾಕರ್,ಕಲಾವತಿ, ಕವಿತ, ಪುಷ್ಪ, ದೇವಯಾನಿ, ದೇವಕಿ ಹಾಗೂ ಇತರರು ಪಾಲ್ಗೊಂಡಿದ್ದರು.