ವಿದ್ಯಾರ್ಥಿ ಘಟಕ ಸ್ಥಾಪನೆ.
1 min read
ಮೂಡಿಗೆರೆ ಜೆಸಿ ವತಿಯಿಂದ ನೂತನವಾಗಿ ಮೂಡಿಗೆರೆಯ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಜೆಸಿಐ ವಿದ್ಯಾರ್ಥಿ ಘಟಕವನ್ನು ಜೆಸಿಐ ಮೂಡಿಗೆರೆ ಅಧ್ಯಕ್ಷರಾದ ಸುಪ್ರೀತ್ ಕಾರ್ಬೈಲ್ ಇವರ ಅಧ್ಯಕ್ಷತೆಯಲ್ಲಿ ವಿಸ್ತರಿಸಲಾಯಿತು. ಜೆಸಿಐ ಮೂಡಿಗೆರೆ ಯುವ ಮಾಣಿಕ್ಯ ಎಂಬ ಹೆಸರಿನೊಂದಿಗೆ ಪದಗ್ರಹಣ ಮಾಡಲಾಯಿತು. ನೂತನ ಘಟಕದ ಅಧ್ಯಕ್ಷರಾಗಿ ಜೆಸಿ ಮಹಮ್ಮದ್ ಇರ್ಷಾದ್ರವರು ಅಧಿಕಾರವನ್ನು ಸ್ವೀಕರಿಸಿದರು. ಈ ಪದಗ್ರಹಣ ಸಮಾರಂಭದಲ್ಲಿ ವಲಯ ಅಧ್ಯಕ್ಷರಾದ ಜೆ ಸಿ ಆಶಾ ಜೈನ್ ಹಾಗೂ ವಲಯ ಉಪಾಧ್ಯಕ್ಷರಾದ ಜೆಸಿ ವಿದ್ಯಾ ರಾಜು ಹಾಗೂ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಶ್ರೀನಿವಾಸ್ ಅವರು ಭಾಗವಹಿಸಿದ್ದರು. ಹಾಗೂ ಸಹಾಯಕ ಪ್ರಾಧ್ಯಾಪಕರಾದ ಭರತ್ ಹಾಗೂ ನಾಗರಾಜ್ ಅವರು ಉಪಸಿತರಿದ್ದರು. ಈ ಕಾರ್ಯಕ್ರಮದಲ್ಲಿ 20 ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು. ಈ ಸಮಾರಂಭದಲ್ಲಿ ವಲಯ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಿಶೇಷ ಅಧಿಕಾರಿ ಜೆ ಸಿ ರಾಜು ಹಾಗೂ ಜೆಸಿ ಸಂಸ್ಥೆಯ ಪೂರ್ವ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಹಾಗೂ ಮೂಡಿಗೆರೆ ಜೆಸಿಐನ ಕಾರ್ಯದರ್ಶಿ, ದೀಕ್ಷಿತ್ ಕಣಚೂರು, ಲೇಡಿ ಜೆಸಿ ಅಧ್ಯಕ್ಷರಾದ ದಿವ್ಯ ಸುಪ್ರೀತ್, ಲೇಡಿ ಜೇಸಿ ಕಾರ್ಯದರ್ಶಿ, ಶ್ರುತಿ ದೀಕ್ಷಿತ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.