“ಪಾದಯಾತ್ರಿಗಳ ಪಾದಪೂಜೆ ಮಾಡಿದ ವಿನಯ್ ಗುರೂಜಿ : ಕೈಜೋಡಿಸಿದ ಭರವಸೆಯ ಶಾಸಕಿ ನಯನಾ ಮೋಟಮ್ಮ.”
1 min read
ವಿನಯ್ ಗುರೂಜಿ ಅವರು ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದ ಪಾದಯಾತ್ರಿಗಳ ಕಾಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಕಾಲು ತೊಳೆದು ಪುಷ್ಪಗಳನ್ನ ಹಾಕಿದರು.
ಶಿವರಾತ್ರಿಯಂದು ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಮಾಡಲು ಪಾದಯಾತ್ರಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ಇದೇ ವೇಳೆ ಪಾದಯಾತ್ರಿಗಳ ಕಾಲು ತೊಳೆದ ವಿನಯ್ ಗುರೂಜಿ ಯಾತ್ರಿಗಳ ತಲೆಗೆ ಪುಷ್ಪಗಳನ್ನ ಹಾಕಿದರು.ಇದೇ ವೇಳೆ ವಿನಯ್ ಗುರೂಜಿಗೆ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಭರವಸೆಯ ಶಾಸಕಿ ನಯನ ಮೋಟಮ್ಮ ಸಾಥ್ ನೀಡಿದರು.
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ ಸಾಮಾಜಿಕ ಸೇವಾ ಸಮಿತಿಯಿಂದ ಮೂಡಿಗೆರೆ ಸಮೀಪದ ನೀರುಗಂಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ ಹಾಗೂ ನಯನಾ ಮೋಟಮ್ಮ ಭಾಗಿಯಾಗಿದ್ದರು.
ಪ್ರತಿ ವರ್ಷವೂ ಸಾಮಾಜಿಕ ಸೇವಾ ಸಮಿತಿ ಧರ್ಮಸ್ಥಳ ಪಾದಯಾತ್ರಿಗಳಿಗೆ ನಿತ್ಯ ಊಟ–ವಸತಿಗೆ ಸೌಲಭ್ಯ ಕಲ್ಪಿಸಿಕೊಡುತ್ತಿದೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.