“ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ : ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ರೂಪುರೇಷೆಯ ಸಭೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ದಿನಾಂಕ 19/02/2024ರ ಸೋಮವಾರದಂದು ಸಭೆ ನಡೆಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅನುಮೊದನೆ ಪಡೆದು ಇದೆ ಮಾರ್ಚ್ 29 ಮತ್ತು 30 ರಂದು ಮೂಡಿಗೆರೆಯ ಅಡ್ಯಂತಾಯ ರಂಗ ಮಂದಿರದಲ್ಲಿ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ತೀರ್ಮಾನಿಸಿತು.
ಸಭೆಯ ಅದ್ಯಕ್ಷತೆಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಾಂತಕುಮಾರ್ ವಹಿಸಿದ್ದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್,ತಾಲ್ಲೂಕು ಕಾರ್ಯದರ್ಶಿಗಳಾದ ಪ್ರಕಾಶ್ ಅರ್.,ನಾರಾಯಣ್.,ತಾಲ್ಲೂಕು ಪ್ರಧಾನ ಸಂಚಾಲಕರುಗಳಾದ ಲಕ್ಷ್ಮಣಗೌಡ.ಡಿ.ಕೆ.,ವಸಂತ್ ಹಾರಗೊಡು.,ಕಸಬಾ ಹೋಬಳಿ ಅಧ್ಯಕ್ಷರಾದ ನಾಗರಾಜ್.,
ಕಾರ್ಯದರ್ಶಿ ನವೀನ್.ಬಿ.ಅರ್.,ಬಾಳೂರು ಹೋಬಳಿ ಅಧ್ಯಕ್ಷರಾದ ರವಿ ಪಟೇಲ್.,ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾ ಜಗದೀಪ್.,ಖಜಾಂಚಿ ರೇಖಾಸತೀಶ್.,ಜಿಲ್ಲಾ ಮಹಿಳಾ ಘಟಕದ ಸಂಚಾಲಕರಾದ ಕಲಾವತಿ ರಾಜಣ್ಣ.,ಸಂಘಟನಾ ಕಾರ್ಯದರ್ಶಿ ಪವಿತ್ರ ರತೀಶ್.,ಗೀತಾ ಲೋಕೇಶ್.,ನಾಗರತ್ನ,ಸುಧಾ ಚಂದ್ರಶೇಖರ್.,ಪುಷ್ಪಾವತಿ.,ಆಶಾ.,ರಕ್ಷಿತ್ ಬಾಳೂರು., ಚಂದ್ರಶೇಖರ್ ಕುನ್ನಹಳ್ಳಿ ಉಪಸ್ಥಿತರಿದ್ದರು.
ಸಾಹಿತ್ಯ ಸಮ್ಮೇಳನದ ಸಲುವಾಗಿ ಪ್ರತಿ ಶನಿವಾರ ಮೂಡಿಗೆರೆಯ ಶಾಸಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಜೆ 4 ಗಂಟೆಗೆ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಅದ್ಯಕ್ಷರಾದ ಶಾಂತಕುಮಾರ್ ತಿಳಿಸಿದರು.
ಈ ಬಾರಿ ಸರ್ಕಾರದ ಅನುದಾನ ಕಡಿಮೆ ಇರುವುದರಿಂದ ಜಿಲ್ಲೆಯ ಎಲ್ಲಾ ಕನ್ನಡಾಭಿಮಾನಿಗಳು ಸಹಕರಿಸಲು ವಿನಂತಿ ಮಾಡಲಾಯಿತು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.