“ಜೆ.ಸಿ.ಐ ಒಂದು ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದೆ : ಯಶಸ್ವಿನಿ ನಾಗರಾಜ್.”
1 min read
ಜೇಸಿಯು ತನ್ನ ಸಂಸ್ಥೆಗೆ ಸೇರ್ಪಡೆಯಾಗುವ ವ್ಯಕ್ತಿ ಯನ್ನು ಪರಿಪೂರ್ಣನನ್ನಾಗಿ ಮಾಡಿ ಸಮಾಜಕ್ಕೆ ನೀಡುವ ಕಾರ್ಯ ಮಾಡುತ್ತಿದೆ ಎಂದು ಜೆಸಿಐ ವಲಯ 14ರ ವಲಯಧ್ಯಕ್ಷೆ ಯಶಸ್ವಿನಿ ನಾಗರಾಜ್ ಹೇಳಿದರು.
ಅವರು 15/09/2023ರ ಶುಕ್ರವಾರದಂದು ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣ ದಲ್ಲಿ ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ “ಯಶಸ್ವಿ ಚಂದ್ರಯಾನ ಜೇಸಿ ಸಪ್ತಾಹ -2023″ರ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಜೇಸಿ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದೆ.ಈ ಸಂಸ್ಥೆ ಯಾವುದೇ ಕಾರ್ಯಕ್ರಮ ಮಾಡಿದರೂ ಅತ್ಯಂತ ಶಿಸ್ತಿ ನಿಂದ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ಡಾ. ಮೋಹನ್ ರಾಜಣ್ಣ ಮಾತನಾಡುತ್ತಾ, ಜೇಸಿ ಸಂಸ್ಥೆಯಿಂದ ತರಬೇತಿ ಪಡೆದವರಲ್ಲಿ ಬಹಳಷ್ಟು ಜನ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡು ಉತ್ತಮ ಜೀವನ ನೆಡೆಸುತ್ತಿದ್ದಾರೆ ಎಂದರು.
ಮೂಡಿಗೆರೆ ಲಯನ್ಸ್ ಅಧ್ಯಕ್ಷ ಕೆ.ಟಿ.ದ್ಯಾವಪ್ಪ ಮಾತನಾಡುತ್ತಾ, ಕೆಲವು ಸಂಘ -ಸಂಸ್ಥೆಗಳು ಜೇಸಿಯ ಕಾರ್ಯವೈಖರಿಯನ್ನು ಅನುಕರಣೆ ಮಾಡಿಕೊಂಡು ಬರುತ್ತಿದೆ. ಒಂದು ಕಾರ್ಯಕ್ರಮದ ಸ್ವಾಗತ, ನಿರೂಪಣೆ, ವಂದನಾರ್ಪಣೆ ಮಾಡುವುದು ಒಂದು ಕಲೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಜೆ.ಸಿ ಚಂದ್ರಶೇಖರ್ ವಹಿಸಿ ಮಾತನಾಡಿದರು.
ಪ್ರತಿಷ್ಠಿತ “ಜೇಸಿ ಕಮಲ ಪತ್ರ “ಪ್ರಶಸ್ತಿಯನ್ನು ಜೆ.ಸಿ. ಪೂರ್ವಾಧ್ಯಕ್ಷರಾದ ಯೋಗೀಶ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಸಾಹಿತಿಗಳು ಮತ್ತು ವಿಜಯವಾಣಿ ಪತ್ರಿಕೆಯ ವರದಿಗಾರರಾದ ನಂದೀಶ್ ಬಂಕೇನಹಳ್ಳಿ ಮತ್ತು ಮೂಡಿಗೆರೆಯ ಅವಿನ್ ಸ್ವರ ಸಂಗಮ ಫೇಸ್ಬುಕ್ ಲೈವ್ ಪೇಜಿನ ಗಾಯಕರಾದ ಉಮೇಶ್ ಆನೆದಿಬ್ಬ ಅವರನ್ನು ಸನ್ಮಾನಿಸಲಾಯಿತು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




