“ನೇಣು ಬಿಗಿದು ಆತ್ಮಹತ್ಯೆ.”
1 min read
ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆ ಶಾಲೆಯ ಹತ್ತಿರ ವಾಸವಿರುವ ವಸಂತ ಪೂಜಾರಿ (62) ಎಂಬ ವ್ಯಕ್ತಿ ಬಂಗಾಡಿ ಕೆನರಾ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಗಳು ಮನೆಯ ಮುಂದೆ ಸೇಲ್ ನೊಟೀಸ್ ಹಾಕಿ ಸೆಂಪ್ಟೆಂಬರ್ 15 ಕೊನೆಯ ದಿನವಾಗಿ ಸಮಯ ನೀಡಿ ಹೋಗಿದ್ದರು.

ಶುಕ್ರವಾರದಂದು ಮನೆ ಹರಾಜು ಮಾಡಲು ಕಡೆಯ ದಿನವಾಗಿತ್ತು ಈ ಬಗ್ಗೆ ನೊಂದು ಮನೆಯ ಹಿಂಬದಿಯಿರುವ ಮೆಟ್ಟಲಿನ ಬದಿಯಲ್ಲಿ ಕಬ್ಬಿಣದ ಕೊಕ್ಕೆಗೆ ಹಗ್ಗ ಕಟ್ಟಿ ಶುಕ್ರವಾರ ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
✍🏻ಬರಹ ಕೃಪೆ.✍🏻
ಶಾಹಿನ್,ಉಜಿರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




