“ಡಾ. ಗೋರೂರು ಚನ್ನಬಸಪ್ಪನವರ ಸ್ಮರಣೆ ಅಂಗವಾಗಿ ಗೀತಗಾಯನ ಸ್ಪರ್ಧೆ.”
1 min read
ದಿನಾಂಕ 14/09/2023 ರಂದು ಡಾ. ಗೋರೂರು ಚನ್ನಬಸಪ್ಪನವರ ಸ್ಮರಣೆ ಅಂಗವಾಗಿ ಗೀತಗಾಯನ ಸ್ಪರ್ಧೆಯನ್ನು ಮೂಡಿಗೆರೆ ತಾಲೂಕಿನ ಚಿನ್ನಿಗ ಜನ್ನಾಪುರದ ಎಲೈಟ್ ಮೈಂಡ್ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲ್ಲೂಕು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಉದ್ಘಾಟಿಸಿದರು.



ತಾಲ್ಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಕೆ.ಬಿ.ಶ್ರೀನಿವಾಸ್ ಉಪಾಧ್ಯಕ್ಷರಾದ ಸುಚಿತ್ರ ಪ್ರಸನ್ನ,ಎಲೈಟ್ ಮೈಂಡ್ ಶಾಲೆಯ ಕಾರ್ಯದರ್ಶಿಗಳಾದ ನಾಗದೇವ್,ಮುಖ್ಯ ಶಿಕ್ಷಕರಾಗಿ ಜಮೀಲ ತಾಲ್ಲೂಕು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯಾದ ಚೇತನ್ ಪದಾಧಿಕಾರಿಗಳಾದ ಜೈಪಾಲ್ ಅಶ್ವಿನಿ ,ಗಣೇಶ್.ಆರ್ ಹಾಗೂ ಪ್ರವೀಣ್ ಜಿಲ್ಲಾ ಸಂಘಟಕರಾದ ನಿಹಾಲ್ ಎನ್.ಎಸ್. ಉಪಸ್ಥಿತರಿದ್ದರು.

ಗೀತ ಗಾಯನ ಸ್ಪರ್ಧೆಗೆ ಬಕ್ಕಿ ಮಂಜುನಾಥ್, ಬಕ್ಕಿರವೀಂದ್ರ, ಜೈಪಾಲ್ ಹೊಸಹಳ್ಳಿಯವರು ಗೀತ ಗಾಯನ ಸ್ಪರ್ಧೆಗೆ ತೀರ್ಪುಗಾರರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.ನೂರಾರು ಮಕ್ಕಳು ಭಾಗವಹಿಸಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




