लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪ ಕಾಡಾನೆ ದಾಳಿಗೆ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ.

ಆಲ್ದೂರು ವಲಯದ ಬನ್ನೂರು ಸಮೀಪ ಅರೆನೂರು ದುರ್ಗಕ್ಕೆ ಹೋಗುವ ಹಾದಿಯಲ್ಲಿ ಇಂದು ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರೋರ್ವರ ಮೇಲೆ ಆನೆ ದಾಳಿ ನಡೆಸಿದ್ದು, ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಮೃತ ವ್ಯಕ್ತಿಯನ್ನು ದುರ್ಗಾ ಕಿನ್ನಿ ಎಂದು ಗುರುತಿಸಲಾಗಿದೆ.

ದಿನಾಂಕ 03/09/2023ರ ಭಾನುವಾರ ಬೆಳಿಗ್ಗೆ ಘಟನೆ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಹೋಗಲು ಪ್ರಯತ್ನಿಸಿದ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೂ ಆನೆ ದಾಳಿಮಾಡಲು ಪ್ರಯತ್ನಿಸಿದೆ.

ಇದರಿಂದ ಸುಮಾರು ಹೊತ್ತು ಮೃತ ವ್ಯಕ್ತಿಯ ಸಮೀಪಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ನಂತರ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಹೆಚ್ಚುವರಿ ಸಿಬ್ಬಂದಿಯ ನೆರವಿನಿಂದ ಆನೆಯನ್ನು ಸ್ಥಳದಿಂದ ಓಡಿಸಲಾಗಿದೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಕಳೆದ ಎರಡು ಮೂರು ದಿನಗಳಿಂದ ಆಲ್ದೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳ ತಂಡವೊಂದು ಸುತ್ತಾಡುತ್ತಾ ಭಯದ ವಾತಾವರಣ ಸೃಷ್ಟಿಸಿದ್ದವು. ಅರಣ್ಯ ಇಲಾಖೆ ಆನೆಗಳ ಚಲನವಲನದ ಬಗ್ಗೆ ನಿಗಾ ಇರಿಸಿ ಮಾಹಿತಿ ನೀಡುತ್ತಿತ್ತು. ಆದರೂ ಸಹ ವ್ಯಕ್ತಿಯೊಬ್ಬರು ಆನೆ ದಾಳಿಗೆ ಬಲಿಯಾಗಿದ್ದಾರೆ.


ಎರಡು ದಿನದ ಹಿಂದಷ್ಟೇ ಸಕಲೇಶಪುರ ಆಲೂರು ಸಮೀಪ ಶಾರ್ಪ್ ಶೂಟರ್ ಒಬ್ಬರನ್ನು ಕಾಡಾನೆ ದಾಳಿ ನಡೆಸಿ ಸಾವನ್ನಪ್ಪಿದ್ದ ಘಟನೆ ಹಸಿಹಸಿಯಾಗಿರುವಾಗಲೇ ಎರಡೇ ದಿನಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಜೀವ ಆನೆಗೆ ಬಲಿಯಾಗಿದೆ.

ಒಟ್ಟಾರೆ ಕಾಡಾನೆಗಳು ಮಲೆನಾಡು ಭಾಗದಲ್ಲಿ ತೀವ್ರ ಸ್ವರೂಪದ ಸಮಸ್ಯೆಯನ್ನು ಸೃಷ್ಟಿಸಿವೆ. ಇದರಿಂದ ಜನಜೀವನಕ್ಕೆ ತುಂಬಾ ತೊಂದರೆಯುಂಟಾಗುತ್ತಿದೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990

About Author

Leave a Reply

Your email address will not be published. Required fields are marked *