“ಸೌಜನ್ಯಳಿಗೆ ನ್ಯಾಯ ಸಿಗುವುದು ಯಾವಾಗ..? : ಧರ್ಮಾಧಿಕಾರಿಗಳೇ ಉತ್ತರಿಸಿ.”
1 min read
ಹಿಂದೆ ಒಂದು ಕಾಲ ಇತ್ತು ನಾಡಪ್ರಭು ಹುಟ್ಟಿದ ಕುಲ ನ್ಯಾಯಕ್ಕಾಗಿ ಹೋರಾಡಿದ ಕುಲ ರಾಷ್ಟ್ರಕವಿ ಜನಿಸಿದ ಕುಲ ಒಕ್ಕಲಿಗರು ಅಂದ್ರೆ ತಾಕತ್ತು ಧೈರ್ಯ ಶೌರ್ಯ. ಆದರೆ ಈ ಪೀಳಿಗೆಯ ಒಕ್ಕಲಿಗರ ಕೈಯಲ್ಲಿ ಏನೂ ಕಿಸಿಯೋಕೆ ಆಗಲ್ಲ. ನಮ್ಮ ಕುಲದ ಹೆಣ್ಣು ಮಗಳ ಮೇಲೆ ಅತ್ಯಾಚಾರವಾಗಿ 11 ವರ್ಷ ಕಳೆಯಿತು ನ್ಯಾಯ ಕೇಳೋಕೆ (ಕೆಲವು ಒಕ್ಕಲಿಗರು ಕೆಲವು ತಾಲ್ಲೂಕು ಸಂಘಗಳು ಮಾತ್ರ ಮುಂದೆ ಬಂದಿದ್ದು) ಇನ್ನು ಉಳಿದ ಒಕ್ಕಲಿಗರ ಸಂಘದವರಿಗೆ ಧೈರ್ಯ ತಾಕತ್ತು ಯಾವುದು ಇಲ್ಲ ತಾಲ್ಲೂಕಿಗೊಂದು ಸಂಘ ಜಿಲ್ಲೆ ಒಂದು ಸಂಘ ಯಾವ ಸಾರ್ಥಕತೆಗೆ ತಿಂಗಳಿಗೊಂದು ಕಾರ್ಯಕ್ರಮ ಮಾಡಿಕೊಂಡು ಕುತ್ತಿಗೆಗೆ ಬರುವ ತನಕ ತಿಂದು ಕುಡಿಯೋಕೆ ಅಷ್ಟೇ ಅನ್ಸುತ್ತೆ . ನಾಚಿಕೆಯಾಗಬೇಕು ಒಕ್ಕಲಿಗ ಕುಲದ ಹೆಣ್ಣು ಮಗಳಿಗೆ ನ್ಯಾಯ ಕೊಡಿಸೋಕೆ 11 ವರ್ಷದಿಂದ ಪಣತೊಟ್ಟು ರಾಜ್ಯ ಹೊರ ರಾಜ್ಯದಲ್ಲಿ ಹೋರಾಡುತ್ತಿರುವುದು ಒಬ್ಬ ಮಹೇಶ್ ಶೆಟ್ಟಿ ತಿಮ್ಮರೋಡಿ ಎನ್ನುವ ವ್ಯಕ್ತಿ. ನೀವುಗಳು ಹೋರಾಡೋದು ಬೇಡ ಕೊನೆ ಪಕ್ಷ ಆ ವ್ಯಕ್ತಿಯ ಜೊತೆ ಕೈಜೋಡಿಸಿ. ಇದು ಸಾಧ್ಯವಾಗದಿದ್ದರೆ ಕೊನೆ ಪಕ್ಷ ನಿಮ್ಮ ಮನೆಯ ಹೆಣ್ಣು / ಗಂಡು ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರವನ್ನು ಕೊಟ್ಟು ಬೆಳೆಸಿ ಅತಿಯಾದ ಸ್ವಾತಂತ್ರ್ಯ ಸಿಕ್ಕಲ್ಲಿ ಸಮಾಜದಲ್ಲಿ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತದೆ, ಹೆಣ್ಣಿಗಾಗಲಿ ಗಂಡಿಗಾಗಲಿ ಅತಿಯಾದ ಸ್ವಾತಂತ್ರ್ಯ ಒಳ್ಳೆಯದಲ್ಲ. ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣ ಇನ್ನು ನಮ್ಮ ಮನಸ್ಸಿನಲ್ಲಿ ಉಳಿದಿದೆ ಇದರ ಹಿಂದೆ ಜನರು ಮಾತನಾಡುವಂತೆ ವೀರೇಂದ್ರ ಹೆಗಡೆ ಕುಟುಂಬದವರು ಇದ್ದರೂ ಸರಿ , ಚಪ್ಪಲಿ ಹೊಲಿಯುವ ಸಾಮಾನ್ಯ ವ್ಯಕ್ತಿ ಇದ್ರು ಸರಿ ಶಿಕ್ಷೆ ಆಗಬೇಕು ಮುಗ್ಧ ಬಾಲಕಿ ಸೌಜನ್ಯ ಳಿಗೆ ನ್ಯಾಯ ಸಿಗಬೇಕು ಇದು ನಮ್ಮ ಗುರಿ. (ಧರ್ಮಾಧಿಕಾರಿಗಳೇ ಸಂಘದ ಬಡ್ಡಿಯನ್ನು ಸಮಯಕ್ಕೆ ಸರಿಯಾಗಿ ವಸೂಲಿ ಮಾಡುವ ನಿಮಗೆ ನಿಮ್ಮ ಗ್ರಾಮದಲ್ಲಿ ನಡೆದಿರುವ ಈ ಅತ್ಯಾಚಾರ ಕೊಲೆಗೆ ಸರಿಯಾದ ನ್ಯಾಯ ಕೊಡಿಸಬೇಕು ಎನ್ನುವ ಮನಸ್ಸಿಲ್ಲವೇಕೆ ಈ ಕೃತ್ಯ ನಿಮ್ಮ ಕುಟುಂಬದವರಿಂದ ಆಗಿಲ್ಲ ಎಂದ ಮೇಲೆ ನ್ಯಾಯ ಕೊಡಿಸಲು ಯಾಕೆ ಹಿಂಜರಿಯುತ್ತಿದ್ದೀರಿ) ಪೂಜ್ಯರೇ ನಿಮ್ಮ ಫೋಟೋವನ್ನು ಮನೆಯೊಳಗೆ ಇಟ್ಟು ಪೂಜಿಸಿದ್ದು ನಾವೇ ಆದ್ದರಿಂದ ನಿಮ್ಮನ್ನು ಪ್ರಶ್ನಿಸುವ ಹಕ್ಕು ನಮಗಿದೆ ಉತ್ತರಿಸಿ..!
✍️ ಬರಹ ಕೃಪೆ.
ಸೌಚಿತ್ ಕಿತ್ತಲೆಮನೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




