लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ, ಪ್ರಾಮಾಣಿಕ ಕನ್ನಡ ಹೋರಾಟಗಾರ ತೇಗೂರು ಜಗದೀಶ್ ಅರಸ್ ಅನಾರೋಗ್ಯದಿಂದ ಬಳಲುತ್ತಿದ್ದು, ಕರವೇ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡರು ಇಂದು ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿದರು. ಚಿಕ್ಕಮಗಳೂರು ಜಿಲ್ಲೆ ಜಿಲ್ಲಾಧ್ಯಕ್ಷರಾದ ಜಗದೀಶ್ ಅರಸ್ ರವರಿಗೆ ಈ ರೀತಿ ಆಗಬಾರದಾಗಿತ್ತು.

ತಾಯಿ ಭುವನೇಶ್ವರಿ ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಬೇಡಿಕೊಳ್ಳುವೆ. ಸದಾ ಕಾರ್ಯಕರ್ತರಿಗೆ ಮಿಡಿಯುವ ವ್ಯಕ್ತಿತ್ವ ನಮ್ಮ ರಾಜ್ಯದ ಕರವೇ ರಾಜ್ಯ ಅಧ್ಯಕ್ಷರಾದ ಟಿ. ಎ.ನಾರಾಯಣಗೌಡರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಇನ್ನೊಬ್ಬರಿಗೆ ಮಿಡಿಯುವ ವ್ಯಕ್ತಿತ್ವ ನಾರಾಯಣಗೌಡರು ವೈದ್ಯರು ವಾಹನದಲ್ಲಿ ಚಲಿಸಬಾರದೆಂದು ತಿಳಿಸಿದ್ದರು. ಅದನ್ನು ಲೆಕ್ಕಿಸದೆ ಕರವೇ ಮುಖಂಡರಿಗೆ ಕಾರ್ಯಕರ್ತರಿಗೆ ಸ್ವಲ್ಪ ನೋವಾದರೂ ಸಹಿಸಿಕೊಳ್ಳದ ರಾಜ್ಯಾಧ್ಯಕ್ಷರು ಇಂದು (ದಿನಾಂಕ 29/08/2023ರ ಮಂಗಳವಾರ) ಕುಟುಂಬ ಸಮೇತ ಆಗಮಿಸಿ ಚಿಕ್ಕಮಗಳೂರಿನ ತೇಗೂರಿನಲ್ಲಿರುವ ಜಗದೀಶ್ ಅರಸ್ ಅವರ ನಿವಾಸಕ್ಕೆ ಬಂದು ಆರೋಗ್ಯ ವಿಚಾರಿಸಿದ್ದು ಅಲ್ಲದೆ ಆರೋಗ್ಯದ ಎಲ್ಲಾ ಖರ್ಚನ್ನು ಕರವೇ ಭರಿಸಲಿದೆ ಎಂದು ಹೇಳಿರುವುದು ತೇಗೂರಿನವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಮತ್ತಷ್ಟು ಧೈರ್ಯ ಆತ್ಮಸ್ಥೈರ್ಯ ಹೆಚ್ಚಿಸಿದೆ.

ಜಗದೀಶ್ ಅರಸ್ ಅವರಿಗೆ ಈವರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆ ತಂದರೆ ಅವರಿಗೆ ಉಚಿತವಾಗಿ ಚಿಕಿತ್ಸೆ ಮಾಡಿಸಿ ಕಳುಹಿಸುತ್ತೆನೆಂದು ಹೇಳಿದ್ದಾರೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *