“ಅಮೃತ ಭಾರತ ಪುಸ್ತಕ ಆ.26ರಂದು ಲೋಕಾರ್ಪಣೆ.”
1 min read
ತಾನು ಬರೆದ ಅಮೃತ ಭಾರತ ಎಂಬ 28ನೇ ಪುಸ್ತಕವನ್ನು ಆಗಸ್ಟ್ 26ರಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಸಂಜೆ 4:30 ಕ್ಕೆ ಲೋಕಾರ್ಪಣೆಯಾಗಲಿದೆ ಎಂದು ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ, ಸಾಹಿತಿ ಹಳೆಕೋಟೆ ರಮೇಶ್ ಹೇಳಿದರು.
ಅವರು ಮಂಗಳವಾರ ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ, ತಾನು 1980ರಲ್ಲಿ ಮೂಡಿಗೆರೆ ತಾಲ್ಲೂಕು ದರ್ಶನವೆಂಬ ಪುಸ್ತಕ ಬರೆದು ಲೋಕಾರ್ಪಣೆ ಮಾಡುವ ಮೂಲಕ ಇಲ್ಲಿಯವರೆಗೆ 28 ಪುಸ್ತಕ ಬರೆದಿದ್ದೇನೆ. ಅದರಲ್ಲಿ ಪ್ರಗತಿಯ ಶಿಖರದಲ್ಲಿ ಚೀನಾ, ವಿಯೇಟ್ನಾಮ್ ಕಾಫಿ, ನಾ ಕಂಡ ಬ್ರೆಜಿಲ್, ಮರಳುಗಾಡಿನ ನಂದನವನ ಇಸ್ರೇಲ್, ಜ್ಞಾನ ಸರೋವರ, ಕನ್ನಡ ಕಟ್ಟಾಳು ಆ.ನಾ.ಕೃ, ರಸಋಷಿ ಕುವೆಂಪು, ನಾ ಕಂಡ ಆ ದ್ವೀಪಗಳು ಎಂಬ 8 ಪುಸ್ತಕ 9ಭಾಷೆಯಲ್ಲಿ ಅನುವಾದಗೊಂಡಿರುವುದು ಹಮ್ಮೆ ತಂದಿದೆ. ತಾನು ಬರೆದ ಎಲ್ಲಾ ಪುಸ್ತಕಗಳು ಮೂಡಿಗೆರೆಯಲ್ಲಿಯೇ ಲೋಕಾರ್ಪಣೆ ಮಾಡಲಾಗಿದೆ ಎಂದು ಹೇಳಿದರು.
ಆಗಸ್ಟ್ 26ರಂದು ಲೋಕಾರ್ಪಣೆಗೊಳ್ಳುವ ಅಮೃತ ಭಾರತ ಪುಸ್ತಕ ಬರೆಯಲು ಕೋವಿಡ್ ಸಂದರ್ಭದಲ್ಲಿ ಚಿಂತನೆ ನಡೆಸಿದ್ದೆ. ಈ ಕೃತಿಯಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಘಟನೆ, ಈ ದೇಶದ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಲಾಗಿದೆ. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತಿನ ಅಧ್ಯಕ್ಷ ಬಿ.ಎಲ್.ಶಂಕರ್ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಹಳೆಕೋಟೆ ಎನ್.ವಿಶ್ರಾಮಿತ್ರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಆಗಮಿಸಿಲಿದ್ದು, ಗಾಯಕಿ ಸುಚಿತ್ರ ಪ್ರಸನ್ನ ಅವರಿಂದ ಗೀತಾ ಗಾಯನ ಕಾರ್ಯಕ್ರಮ ನೆರವೇರಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಶಾಂತಕುಮಾರ್, ಪ್ರದೀಪ್ ಮತ್ತಿತರರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.