“ಸೌಜನ್ಯ ಕೇಸ್ ಮರು ತನಿಖೆ ಇಲ್ಲ : ಗೃಹ ಸಚಿವ ಜಿ.ಪರಮೇಶ್ವರ್.”
1 min read
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರುತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಿಬೇಕೆಂದು ರಾಜ್ಯ ಮಾತ್ರವಲ್ಲದೇ
ಹೊರರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿದೆ
ಈ ಬೆನ್ನಲ್ಲೇ ಗೃಹಸಚಿವ ಜಿ.ಪರಮೇಶ್ವರ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.

ಸೌಜನ್ಯ ಪ್ರಕರಣ ಮರು ತನಿಖೆ ಇಲ್ಲ, ಈ ಪ್ರಕರಣ ಕಾನೂನಾತ್ಮಕವಾಗಿ ಪೂರ್ಣಗೊಂಡಿದ್ದು, ಮರುತನಿಖೆ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಇದ್ದೇ ಇರುತ್ತದೆ. ಅದಕ್ಕೆ ಏನು ಮಾಡಲು ಬರೋದಿಲ್ಲ ಎಂದಿದ್ದಾರೆ. ಸೌಜನ್ಯ ಪ್ರಕರಣ ಮುಗಿದು ಹೋಗಿದ್ದು ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಮರು ತನಿಖೆ ವಿಚಾರ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.
ಆದರೆ ನಿಜವಾದ ಆರೋಪಿಗಳು ಯಾರು ಎಂದು ಇಡೀ ರಾಜ್ಯದ ಜನತೆಯ ಮುಂದೆ ದೊಡ್ಡ ಯಕ್ಷಪ್ರಶ್ನೆ ಇದೆ,ನಿಜವಾಗಿಯೂ ಈ ಘಟನೆಗೆ ಯಾರು ಹೊಣೆ,ಪಾಪದ ಹೆಣ್ಣಿನ ಕುಟುಂಬದ ಕಣ್ಣೀರು ಒರೆಸುವವರು ಯಾರು?ನ್ಯಾಯ ಕೊಡಿಸುವ ಮಾಧ್ಯಮ ಮತ್ತು ಪತ್ರಿಕೆಯಂತಹ ದೊಡ್ಡ ಶಕ್ತಿಗಳನ್ನೆಲ್ಲ ಕಟ್ಟಿಹಾಕಿ ಕಾಣದ ಕೈಗಳೆಲ್ಲಾ ಕೆಲಸ ಮಾಡುತ್ತಿದೆ. ಆದರೂ ಆ ಭಗವಂತ ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ,ಆ ಪಾಪದ ಹೆಣ್ಣು ಮಗಳು ಸೌಜನ್ಯಳಿಗೆ ನ್ಯಾಯ ಸಿಗಲಿ ಎಂಬುದೇ ನಮ್ಮ ಆಶಯ……
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






