“ದಾಖಲೆಯಿರುವ ದಲಿತರ ಭೂಮಿಯನ್ನು ಒತ್ತುವರಿಯಿಂದ ಬಿಡಿಸಿಕೊಡದಿದ್ದರೆ ಆಹೋರಾತ್ರಿ ಧರಣಿ : ಭಾಗ್ಯ ಮಂಜುನಾಥ್.”
1 min read
ದಾಖಲೆಯಿರುವ ದಲಿತರ ಭೂಮಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಿಕೊಡಬೇಕೆಂದು ಡಿಸಿ, ಎಸಿ ಮತ್ತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ಇನ್ನು ಒಂದು ವಾರದಲ್ಲಿ ಒತ್ತುವರಿಯಾಗಿದ್ದ ದಲಿತರ ಜಮೀನನ್ನು ಬಿಡಿಸಿಕೊಡದಿದ್ದರೆ ತಾಲ್ಲೂಕು ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಹೊಯ್ಸಳಲು ಗ್ರಾಮದ ಭಾಗ್ಯ ಮಂಜುನಾಥ್ ಎಚ್ಚರಿಕೆ ನೀಡಿದರು.
ಅವರು ಮಂಗಳವಾರ ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ, ಹೊಯ್ಸಳಲು ಗ್ರಾಮದ ಸರ್ವೇ ನಂ 119ರಲ್ಲಿ ಕರಿಯಯ್ಯ ಮತ್ತು ಗಿಡ್ಡಮ್ಮ ಅವರಿಗೆ ಸೇರಿದ ತಲಾ 4 ಎಕರೆ ಭೂಮಿಯಲ್ಲಿ ಇಬ್ಬರ ಭೂಮಿಯೂ ತಲಾ 2 ಎಕರೆ ಭೂಮಿ ಹಾಗೂ ದುಗ್ಗಯ್ಯ ಎಂಬುವರಿಗೆ ಸೇರಿದ 2 ಎಕರೆ ಭೂಮಿ ಸೇರಿದಂತೆ ಒಟ್ಟು 6 ಎಕರೆ ದಾಖಲೆಯಿರುವ ಭೂಮಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಎರಡು ಬಾರಿ ಸರ್ವೇ ಅಧಿಕಾರಿಗಳು ಸ್ಥಳಕ್ಕೆ ಬಂದು ಜಾಗ ಬಿಡಿಸಿಕೊಡದೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಹಾಗೆಯೇ ವಾಪಾಸು ತೆರಳಿದ್ದಾರೆಂದು ಆರೋಪಿಸಿದರು.
ಈ ಮೂವರಿಂದ ಒತ್ತುವರಿ ಮಾಡಿಕೊಂಡಿದ್ದ ಭೂಮಿಯನ್ನು ಪ್ರಭಾವಿಗಳು ಅವರ ಕುಟುಂಬದವರ ಹೆಸರಿಗೆ ಫಾರಂ ನಂ 57ರಲ್ಲಿ ಖಾತೆ ಮಾಡಿಕೊಳ್ಳುವ ಬಗ್ಗೆ ಗಮನಕ್ಕೆ ಬಂದಿದೆ. ಅಧಿಕಾರಿಗಳು ಕೂಡ ಪ್ರಭಾವಿಗಳೊಂದಿಗೆ ಶಾಮೀಲಾಗಿ ಅವರಿಗೆ ಖಾತೆ ಮಾಡಿಕೊಡಬಾರದು. ಇನ್ನು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಧರಣಿ ಅನಿವಾರ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊಯ್ಸಳಲು ಗ್ರಾಮದ ಹರೀಶ್, ಎಚ್.ಕೆ.ಸುಂದ್ರೇಶ್, ಮಂಜುನಾಥ್ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.