“ಲಯನ್ಸ್ ಸಂಸ್ಥೆಯಿಂದ ಯು.ಪಿ.ಸಹದೇವ ಪಟೇಲ್ಗೆ ಸನ್ಮಾನ.”
1 min read
ಲಯನ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಯು.ಇ.ಪ್ರಭಾಕರ್ ಮತ್ತು ಬಿ.ಜೆ.ಪೂರ್ಣ ಪ್ರಭಾಕರ್ ಅವರ ಪುತ್ರ ಯು.ಪಿ.ಸಹದೇವ ಪಟೇಲ್ ಅವರು ಇಂಟರ್ ನ್ಯಾಷನಲ್ ಮಾರ್ಕೇಟಿಂಗ್ನಲ್ಲಿ ಎಂಎಸ್ಸಿ ಉನ್ನತ ವ್ಯಾಸಾಂಗಕ್ಕಾಗಿ ಸ್ಕಾಟ್ಲ್ಯಾಂಡ್, ಯುನೈಟೆಡ್ ಕಿಂಗ್ಡಂನ ಹ್ಯಾರಿಯೆಟ್ ವಾಟ್ ವಿಶ್ವ ವಿದ್ಯಾಲಯಕ್ಕೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮೂಡಿಗೆರೆ ಲಯನ್ಸ್ ಸಂಸ್ಥೆ ವತಿಯಿಂದ ಯು.ಪಿ.ಸಹದೇವ ಪಟೇಲ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಕೆ.ಟಿ.ದೇವಪ್ಪ ಮಾತನಾಡಿ, ಮಲೆನಾಡಿನಿಂದ ವಿದೇಶಕ್ಕೆ ವಿದ್ಯಾಭ್ಯಾಸಕ್ಕೆಂದು ತೆರಳುತ್ತಿರುವ ಕೃಷಿ ಕುಟುಂಬದ ಯುವಕನ ಸಾಧನೆ ಶ್ಲಾಘನೀಯವಾಗಿದೆ, ಇಂತಹ ಪ್ರತಿಭೆಗಳಿಗೆ ಅಭಿನಂದಿಸಿ ಪ್ರೋತ್ಸಾಹಿಸುವುದು ಸಂಘ ಸಂಸ್ಥೆಗಳಿಂದ ನಡೆಯಬೇಕಾಗಿದೆ. ಅಂತಹ ಕಾರ್ಯ ಲಯನ್ಸ್ ವತಿಯಿಂದ ಆಗುತ್ತಿದ್ದು ಖುಷಿ ತಂದಿದೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಪೂರ್ವ ಜಿಲ್ಲಾ ರಾಜ್ಯಪಾಲ ಎನ್.ಎಲ್.ಸುಂದರೇಶ್, ವಲಯಾಧ್ಯಕ್ಷ ಜಿ.ಎಂ.ಲಕ್ಷ್ಮಣ್ಗೌಡ, ಲಯನ್ಸ್ ಕಾರ್ಯದರ್ಶಿ ಎಚ್.ಬಿ.ಸತ್ಯನಾರಾಯಣ, ಕೋಶಾಧ್ಯಕ್ಷ ಜಿ.ಎಸ್.ತಮ್ಮಣ್ಣಗೌಡ, ಎಂ.ಎನ್.ಅಶ್ವಥ್, ಡಿ.ಕೆ.ಲಕ್ಷ್ಮಣಗೌಡ, ಗೋಪಾಲಗೌಡ, ಲಯನ್ಸ್ ಸಂಸ್ಥೆ ಪೂರ್ವಾಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪ್ರಭಾಕರ್ ದಂಪತಿಗಳು ಮೂಲ ಕೃಷಿಕರಾಗಿದ್ದು,ಸಹದೇವ್ ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ BHM.(ಬ್ಯಾಚುಲರ್ ಆಫ಼್ ಹೋಟೆಲ್ ಮ್ಯಾನೆಜ್ ಮೆಂಟ್ ವ್ಯಾಸಂಗವನ್ನು ನಾಲ್ಕು ವರ್ಷ ಮಾಡಿರುತ್ತಾರೆ.
ಈ ಹಿಂದೆ ರಿಲೆಯೆನ್ಸ್ ಮತ್ತು ನೊವೆಲ್ ಆಫ಼ೀಸ್ ನಲ್ಲಿ ಕೆಲಸ ಮಾಡಿರುತ್ತಾರೆ.
ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.