“ಕುವೆಂಪು ಪರಿಸರದಿಂದ ತೇಜಸ್ವಿ ನೆಲದವರೆಗೆ ಪರಿಸರ ಜಾಗೃತಿ ಕಾರ್ಯಕ್ರಮ.”
1 min read
ಜೀವ ವೈವಿಧ್ಯತೆಯ ಶ್ರೀಮಂತಿಕೆಯನ್ನು ಸಂರಕ್ಷಣೆ ಹಾಗೂ ದಾಖಲು ಮಾಡಿ ಅದನ್ನು ಭವಿಷ್ಯದ ಭಾರತದ ವಿದ್ಯಾರ್ಥಿ ಯುವ ಸಮೂಹಕ್ಕೆ ವರ್ಗಾವಣೆ ಮಾಡುವ ಜವಾಬ್ದಾರಿ ವಿಶೇಷವಾಗಿ ಗ್ರಾಮ ಪಂಚಾಯಿತಿಗಳ ಮೇಲೆ ಇದ್ದು ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಕಾರ್ಯೋನ್ಮುಖವಾಗಬೇಕು ಎಂದು ಲೇಖಕ ಡಿ.ಎಂ. ಮಂಜುನಾಥಸ್ವಾಮಿ ಅಭಿಪ್ರಾಯಪಟ್ಟರು.
ಸಮೀಪದ ವಸ್ತಾರೆ ಗೌತಮ ಪ್ರೌಢಶಾಲೆಯ ನಿಸರ್ಗ ಸಿರಿ ರಂಗಮಂದಿರದ ಸಭಾಂಗಣದಲ್ಲಿ ಶೃಂಗೇರಿ ಜೋಗಿಬೈಲಿನ ಬೀಸ್ ಸಂಸ್ಥೆಯು ಕುವೆಂಪು ಪರಿಸರದಿಂದ ತೇಜಸ್ವಿ ನೆಲದವರೆಗೆ ಹಮ್ಮಿಕೊಂಡಿದ್ದ ಪರಿಸರ ಕೃಷಿ ಜಾಗೃತಿ ಅಭಿಯಾನದ 51ನೇ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಮಹತ್ವ ಮತ್ತು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಕುರಿತು ಮಾತನಾಡಿದರು.

ಬೀಸ್ ಸಂಸ್ಥೆಯ ಸಂಚಾಲಕರಲ್ಲಿ ಒಬ್ಬರಾದ ಜಾನಪದ ಲೋಕದ ಪ್ರಸಿದ್ಧ ಗಾಯಕನಾದ ಮಣಿ ನಾಲ್ಕೂರು ಅವರು ಮಾತನಾಡಿ, ಈ ಪರಿಸರ ನಡೆಗೆ ನಮ್ಮ ಪುಟ್ಟ ಪುಟ್ಟ ಹೆಜ್ಜೆಗಳನ್ನು ದಿಟ್ಟವಾಗಿ ಇಡುತ್ತಾ ಒಂದು ಹಸಿರು ಹಾದಿಯಲ್ಲಿ ಇಡೀ ವಿದ್ಯಾರ್ಥಿ ಯುವ ಸಮೂಹವನ್ನು ನಾದ ಬೆರೆತ ತನ್ಮಯತೆಯೊಂದಿಗೆ ಕರೆದುಕೊಂಡು ಹೋಗಬೇಕಾಗಿದೆ, ಈ ನಿಟ್ಟಿನಲ್ಲಿ ನಮ್ಮಪರಿಸರ ಜಾಗೃತಿ ಕಾರ್ಯಕ್ರಮ ಸಾಗುತ್ತಿದೆ ಎಂದು ವಿದ್ಯಾರ್ಥಿಗಳಿಗೆ ಪರಿಸರದ ಹಾಡು ಮತ್ತು ನೃತ್ಯವನ್ನು ಅಭ್ಯಾಸ ಮಾಡಿಸಿದರು.
ಬಿಸ್ ಸಂಸ್ಥೆಯ ಮುಖ್ಯ ಸಂಚಾಲಕ ಕೂವೆ ನಾಗರಾಜ್ ಅವರು ಜೀವ ವೈವಿಧ್ಯತೆಯ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿ ಸಂವಾದ ಮತ್ತು ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಶಾಲೆಯ ಮುಖ್ಯ ಶಿಕ್ಷಕ ದೇವರಾಜ್ ಅವರು ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಶಾಲಾ ವತಿಯಿಂದ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ನಳಿನ, ಮಂಜುನಾಥ್, ಉಮೇಶ್ ಕುಮಾರ್ ಮುಂತಾದವರು ಇದ್ದರು.
ಜೈ ಶಂಕರ್ ಅವರು ಕಾರ್ಯಕ್ರಮ ನಿರೂಪಣೆ ಮತ್ತು ಸ್ವಾಗತ ಮಾಡಿ ಹರೀಶ್ ಅವರು ವಂದಿಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.