“ದಾರದಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಮಾರಂಭ…”
1 min read
ಶಾಸಕರಾಗಿ ಆಯ್ಕೆಯಾದ ನಂತರ ಪ್ರಥಮವಾಗಿ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ದಾರದಹಳ್ಳಿಗೆ ಗ್ರಾಮಕ್ಕೆ ಆಗಮಿಸಿದ ಭರವಸೆಯ ಶಾಸಕಿ ನಯನಮೋಟಮ್ಮರವರಿಗೆ ಗ್ರಾಮ ಪಂಚಾಯತಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ನಂತರ ದಾರದಹಳ್ಳಿಯ ಸಾಂಸ್ಕೃತಿಕ ಭವನದಲ್ಲಿ ಸಾರ್ವಜನಿಕ ಕಾರ್ಯಕ್ರಮ ಅಯೋಜಿಸಲಾಗಿತ್ತು.


ಸಭೆಯಲ್ಲಿ.ಅಧ್ಯಕ್ಷರಾದ ಸಾಜೀದ ಎಂ.ಲತೀಫ್,
ಉಪಾಧ್ಯಕ್ಷರಾದ ಶಾರದ.ಟಿ.ಡಿ.,ಸದಸ್ಯರಾದ
ಮಯೂರ.ಹೆಚ್.ಎಲ್.,ರಘುಕುಮಾರ್ ಮಗ್ಗಲಮಕ್ಕಿ,ಸಂಪತ್ ಬಿಳ್ಳೂರು,ಸಿದ್ದೇಶ್ ಕೆಸವಳಲು,
ವಿಕ್ರಮ್.ಡಿ.ಕೆ.,ಸೌಭಾಗ್ಯ ಗೀರಿಶ್,ಸಾಧನ.ಪಿ.ಮಣೀಶ್,ಮಂಜುನಾಥ.ಕೆ.ವಿ.,
ರೇಣುಕಾ ಮಹೇಶ್,ನವೀನ.ಹೆಚ್.ಇ.,ಕುಸುಮ ಸಂಜೀವ.ಮಗ್ಗಲಮಕ್ಕಿ,
ಗ್ರಾಮದ ನೂರಾರು ಜನ ಊರಿನ ಸಮಸ್ಯೆಗಳ ಬಗ್ಗೆ ಅಹವಾಲು ನೀಡಲು ಮುಂದಾದರು.
ತನ್ನ ತಾಯಿಯ ಹುಟ್ಟು ಗ್ರಾಮಕ್ಕೆ ಆಗಮಿಸಿದ ಶಾಸಕಿಯನ್ನು ಗ್ರಾಮಸ್ಥರು ಬಹಳ ಪ್ರೀತಿಯಿಂದ ಬರಮಾಡಿಕೊಂಡರು.

ನೂತನ ಶಾಸಕಿಯನ್ನು ನೊಡಲು ಸಹ ಜನ ಮುಗಿಬಿದ್ದದ್ದು ವಿಶೇಷವಾಗಿತ್ತು.
ಶಾಸಕರು ಮಾತನಾಡುತ್ತ ಮೊದಲು ನನ್ನ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತಿಗಳನ್ನು ಭೇಟಿ ಮಾಡಿ ನಂತರ ಪ್ರತಿ ಹಳ್ಳಿಗಳಿಗೆ ಭೇಟಿ ಮಾಡುತ್ತೇನೆ ಎಂದರು.
ಸಮಸ್ಯೆಗಳಿದ್ದರೆ ನನ್ನ ಕಚೇರಿಗೆ ಭೇಟಿ ನೀಡಬಹುದು.ನಾಲ್ಕು ಜನ ನನ್ನ ಆಪ್ತ ಸಹಾಯಕರ ಮೂಲಕವು ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ದಾರದಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಸಮೀವುಲ್ಲಾ ಶರೀಫ್,ಕಾರ್ಯದರ್ಶಿ ಮಧು,ದ್ವಿತೀಯ ದರ್ಜೆ ಸಹಾಯಕರಾದ ರಮೇಶ್,
ಬಿಲ್ ಕಲೆಕ್ಟರ್ ಗಳಾದ ನವೀನ್,ಶಿವಣ್ಣ,ಜಾನಪದ ಕಲಾವಿದರಾದ ಚಕ್ರಮಣಿ ಸುಬ್ರಹ್ಮಣ್ಯ ಹಾಜರಿದ್ದರು.
ಹಲವು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಕೆಸವಳಲು ಜಯರಾಂ ವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.