“ಮಣಿಪುರ ಹಿಂಸಾಚಾರಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮವಾಗಬೇಕು : ಬಿ.ರುದ್ರಯ್ಯ.”
1 min read
ಸಂಘ ಪರಿವಾರ ಪ್ರಾಯೋಜಿತ ಭಯೋತ್ಪಾಧಕ ದಾಳಿಯಲ್ಲಿ ಮಣಿಪುರ ರಾಜ್ಯ ಸಂಪೂರ್ಣ ಹಿಂಸಾಚಾರಕ್ಕೆ ಗುರಿಯಾಗಿದೆ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹೇಳಿದರು.
ಅವರು ಶುಕ್ರವಾರ ಸಿಪಿಐಎಂಎಲ್ ಪಕ್ಷದಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಮಣಿಪುರದ ಇಡೀ ಆಡಳಿತ ವ್ಯವಸ್ಥೆ ಭಯೋತ್ಪಾಧಕರ ನಿಯಂತ್ರಣಕ್ಕೆ ಹೋಗಿದೆ. ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಿದ ನಂತರವೂ ಮೈತ್ರಿ ಪುಂಡರ ಪಡೆ ತನ್ನ ಹಟ್ಟಹಾಸ ಮುಂದುವರೆಸಿದೆ. ಇದರ ಬೆನ್ನಲ್ಲೇ ಹರಿಯಾಣದಲ್ಲಿ ಹಿಂದೂ ಶೋಭಯಾತ್ರೆಯ ಮೂಲಕ ಸಶಸ್ತ್ರ ದಾಳಿ ಮುಂದುವರೆದಿದೆ.
ಅಂಜುಮನ್ ಮಸೀದಿಗೆ ಬೆಂಕಿ ಹಚ್ಚಿ ಧರ್ಮಗುರು ಮಸೂದ್ ಎಂಬುವರ ಹತ್ಯೆ ಮಾಡಲಾಗಿದೆ. ಇದನ್ನು ಖಂಡಿಸಿ ಪ್ರತಿಪಕ್ಷಗಳ ಮೈತ್ರಿಕೂಟದ ನಾಯಕರು ಪಾರ್ಲಿಮೆಂಟ್ನಲ್ಲಿ ತೀವ್ರ ಚರ್ಚೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕಾಗಿ ಆಗ್ರಹಿಸಬೇಕೆಂದು ಒತ್ತಾಯಿಸಿದರು.

ಸಿಪಿಐಎಂಎಲ್ನ ಪಾಲಿಟ್ ಬ್ಯುರೋ ಸದಸ್ಯ ಆರ್.ಮಾನಸಯ್ಯ ಮಾತನಾಡಿ, ಇತ್ತ ಕಾರ್ಮಿಕ ಹಾಗೂ ರೈತ ವಿರೋಧಿ ಕಾಯಿದೆಗಳನ್ನು ಜಾರಿ ಮಾಡುವವರೇ ಮಣಿಪುರ ಹಾಗೂ ಹರಿಯಾಣದಲ್ಲಿ ನರಮೇಧ ನಡೆಸುತ್ತಿದ್ದಾರೆ. ಹಾಗಾಗಿ ರಾಷ್ಟçಪತಿಗಳು ಕೂಡಲೇ ಮಧ್ಯ ಪ್ರವೇಶಿಸಿ ಮಣಿಪುರ ಹಾಗೂ ಹರಿಯಾಣದಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮೈಸೂರಿನ ಶ್ರೀನಿವಾಸ್, ಕೊಡಗಿನ ಸಣ್ಣಪ್ಪ, ಮಂಜುನಾಥ್, ರಾಯಚೂರಿನ ಸಂತೋಷ್, ಮಲ್ಲಯ್ಯ, ಲಕ್ಷ್ಮಿ, ಜಾನಕಿ, ಶಾರದಾ, ಜಿಲ್ಲಾ ಸಮಿತಿ ಸದಸ್ಯರಾದ ಶಂಕರ್, ನಾಗೇಶ್ ಬೊಗಸೆ, ಸಂದೀಪ್ ಬೊಗಸೆ, ಕೃಷ್ಣಪ್ಪ ಬಿಳಗುಳ ಮತ್ತಿತರರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.