“ಆಧಾರ್ ಗೆ ಇಲ್ಲ……ಆಧಾರ ಕೇಂದ್ರ…”
1 min read
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ನಲ್ಲಿ ಪೋನ್ ನಂಬರ್ ತಿದ್ದುಪಡಿಗೆ ದಿನ ನಿತ್ಯ ನೂರಾರು ಸಂಖ್ಯೆಯಲ್ಲಿ ಆಧಾರ್ ಕೇಂದ್ರಕ್ಕೆ ಬರುತ್ತಿದ್ದು ಪ್ರಸ್ತುತ ಮೂಡಿಗೆರೆ ಪಟ್ಟಣದಲ್ಲಿ ಕೇವಲ ಎರಡು ಆಧಾರ್ ಕೇಂದ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಆ ಕೇಂದ್ರಗಳಲ್ಲಿ ದಿನಕ್ಕೆ ಕೇವಲ 30 ಜನರಿಗೆ ಮಾತ್ರ ಸರ್ವಿಸ್ ಕೊಡಲಾಗುತ್ತಿದೆ.


ಮೂಡಿಗೆರೆ ತಾಲೂಕಿನಲ್ಲಿ ಒಂದು ವಾರದಿಂದ ವಿಪರೀತ ಮಳೆ ಗಾಳಿ ಹೆಚ್ಚಾಗಿದ್ದರೂ ಸಹ ಸಾರ್ವಜನಿಕರು ಮಳೆ ಗಾಳಿ ಲೆಕ್ಕಿಸದೆ ದಿನಂಪ್ರತಿ ಬೆಳಿಗ್ಗೆ 4 ಗಂಟೆಗೆ ಕ್ಯೂ ನಿಲ್ಲಲು ಬರುತ್ತಿದ್ದಾರೆ,ಪಟ್ಟಣ ಪ್ರದೇಶದ ನಾಗರಿಕರು ಬೆಳಿಗ್ಗೆ 4 ಕ್ಕೆ ಬಂದು ಕ್ಯೂ ನಿಂತರೆ ಗ್ರಾಮೀಣ ಪ್ರದೇಶದ ಜನರು ಬಸ್ ಹಿಡಿದು 8ಗಂಟೆಗೆ ಬಂದರೂ ಸಹ ಟೋಕನ್ ಸಿಗದೆ ದಿನನಿತ್ಯ ವಾಪಾಸು ಹೋಗುತ್ತಿದ್ದು ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಆದ್ದರಿಂದ ಮೂಡಿಗೆರೆಯಲ್ಲಿ ಇನ್ನೂ ಹೆಚ್ಚಿನ ಆಧಾರ್ ಕೇಂದ್ರಗಳು ಮತ್ತು ಸಿಬ್ಬಂದಿಗಳನ್ನ ನೇಮಕ ಮಾಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾಗಾಗಿ ಸರ್ಕಾರ ಆಧಾರ್ ಕಾರ್ಡಿನಲ್ಲಿರುವ ಪೋನ್ ನಂಬರ್ ಇಲ್ಲದಿದ್ದರೂ ಗೃಹಲಕ್ಷ್ಮಿ ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಆಧಾರ್ ಕೇಂದ್ರಗಳನ್ನು ಹೆಚ್ಚಿಸಿ ಇರುವ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗಿರೀಶ್ ಹಂಡುಗುಳಿ ಆಗ್ರಹಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.