लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲ್ಲೂಕಿನ, ದಾರದಹಳ್ಳಿ ಗ್ರಾಮ ಪಂಚಾಯತಿಯ ಕಡಿದಾಳು ಗ್ರಾಮದ ಗ್ರಾಮಸ್ಥರಿಂದ ಕರುನಾಡೆ ಮೆಚ್ಚುವಂತ ಕೆಲಸ ನಡೆದಿದೆ.
ದಾರದಹಳ್ಳಿ ಮುಖ್ಯ ರಸ್ತೆಯಿಂದ ಎರಡು ಕಿಲೋಮೀಟರ್ ಕಡಿದಾಳು ರಸ್ತೆ ಇರುವುದು.
ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿ ಕುಡಿಯುವ ನೀರು ಮತ್ತು ರಸ್ತೆಯ ಕೆಲಸ ಬಹಳ ದಿನದಿಂದ ಬಾಕಿ ಉಳಿದಿದೆ.
ಮಾಜಿ ಶಾಸಕರುಗಳು ಅ ಊರಿಗೆ ಹೆಚ್ಚಿನ ಮುತುವರ್ಜಿ ವಹಿಸದಿರುವುದು ವಿಪರ್ಯಾಸ.
ನೀರಿನ ವ್ಯವಸ್ಥೆ ಸಮರ್ಪಕವಾಗಿ ಇದ್ದರು ಮನೆ ಮನೆಗೆ ತಲುಪಿಸುವ ಪೈಪ್ ವ್ಯವಸ್ಥೆ ಸರಿ ಇಲ್ಲದಿರುವುದು ಕಂಡು ಬಂದಿದೆ.
ಕಡಿದಾಳ್ ವಾಟ್ಸಪ್ “ಗಜಪಡೆ”ಗ್ರೂಪ್ ಮಾಡಿದ ಅ ಊರಿನ ಯುವಕರು ಊರಿನ ಎಲ್ಲಾ ಮನೆಯ ಜನರನ್ನ ಒಟ್ಟುಗೂಡಿಸುವಲ್ಲಿ ಸಫಲರಾದರು.
ರಸ್ತೆಯ ಬದಿ ಬೆಳೆದು ನಿಂತು ಸಂಚಾರಕ್ಕೆ ಅಡ್ಡಲಾದ ಗಿಡ ಗಂಟಿಗಳನ್ನು ತೆರವುಗೊಳಿಸಲು ಕರೆ ಕೊಟ್ಟರು.
ಸರ್ಕಾರದ ಯಾವುದೇ ಸಹಾಯಧನಕ್ಕೂ ಕಾಯದೆ ಊರಿನ ಶುಚಿತ್ವ ಗ್ರಾಮಸ್ಥರಿಗೂ ಸಂಬಧಿಸಿದೆಂದು ತೋರಿಸಿ ಕೊಟ್ಟಿದ್ದಾರೆ.

ಸರ್ಕಾರದ ಅನುದಾನಕ್ಕೆ ಕಾಯದೆ ರಸ್ತೆಯ ಅಕ್ಕ ಪಕ್ಕ ಗಿಡಗಂಟೆಗಳನ್ನು ತೆರವುಗಳಿಸಿ ಇತರೆ ಗ್ರಾಮದವರಿಗೆ ಮಾದರಿಯಾದ ಗ್ರಾಮಸ್ಥರು.

ಸುಮಾರು ಎರಡು ಕಿಲೋಮೀಟರ್ ಹಾದು ಹೋಗುವ ರಸ್ತೆಯ ಅಕ್ಕ ಪಕ್ಕ ಗಿಡಗಂಟೆಗಳನ್ನು ತೆರವುಗೊಳಿಸಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಸುಮಾರು 60 ಮನೆ ಇರುವ ಕಡಿದಾಳು ಗ್ರಾಮದ ಊರಿನ ಯುವಕರು ಮತ್ತು ಹಿರಿಯರು ಸೇರಿ ಕಡಿದಾಳು ಗಜಪಡೆ ಎಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದು. ಊರಿಗೆ ಸಂಬಂಧಪಟ್ಟ ಯಾವುದೇ ಕೆಲಸಗಳಾಗಲಿ ಎಲ್ಲರೂ ಒಗ್ಗಟ್ಟಾಗಿ ಸೇವಾ ಕಾರ್ಯ ಮಾಡುವುದರಲ್ಲಿ ಈ ಗ್ರಾಮ ಬೇರೆ ಗ್ರಾಮಸ್ಥರಿಗೆ ಮಾದರಿಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ದಾರದಹಳ್ಳಿ ಮೆಸ್ಕಾಂ ಅಧಿಕಾರಿಯಾದ J E ಮಂಜುನಾಥ್ ಅವರನ್ನು ಮಳೆಗಾಲದಲ್ಲೂ ಯಾವುದೇ ತೊಂದರೆಯಾಗದಂತೆ ವಿದ್ಯುತ್ ಸಂಪರ್ಕವನ್ನು ನೀಡುತ್ತಿದ್ದು. ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಎಲ್ಲಾ ಊರಿನಲ್ಲಿ ಇ ರೀತಿಯ ಕೆಲಸ ಮಾಡಿದರೆ ಉತ್ತಮ ಊರಾಗಿ ಮಾಡಬಹುದು.
ಕಡಿದಾದ ರಸ್ತೆ ಬದಿಯ ಕಸವನ್ನು ಶುಚಿಯಾಗಿ ಮಾಡಿದ ಕಡಿದಾಳಿನ ಜನತೆಗೆ ಅವಿನ್ ಟಿವಿ ಕಡೆಯಿಂದ ಅಭಿನಂದನೆಗಳು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *