“ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ.”
1 min read
ದಿನಾಂಕ 26/07/2023ರ ಬುಧವಾರದಂದು ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲ್ಲೂಕಿನ, ಜನ್ನಾಪುರದ ಎಲೈಟ್ ಮೈಂಡ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಆಚರಿಸಲಾಯಿತು .

ಅರ್ಥ್ ತಂಡದ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನ ಶ್ರೀಮತಿ ಮಧುರ ರವರು ಪ್ರಾಸ್ತಾವಿಕವಾಗಿ ನುಡಿದು ಕಾರ್ಯಕ್ರಮವನ್ನ ನಿರೂಪಿಸಿದರು, ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶೌರ್ಯ, ಅಭಿಘ್ನ ಮತ್ತು ಖುಷಿ ಸೈನಿಕರ ಬಗ್ಗೆ ಮಾತುಗಳನ್ನಾಡಿದರು.

ನಂತರ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ನಮನವನ್ನ ಸಲ್ಲಿಸಿ, ಅವರಿಗಾಗಿ ಒಂದು ಗೀತೆಯನ್ನ ಹಾಡುವ ಮೂಲಕ ನೆರೆದಿದ್ದ ಎಲ್ಲರನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಜಯಪಾಲ್ ಮಂತ್ರಮುಗ್ಧಗೊಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಮತ್ತು ಪದಾಧಿಕಾರಿಗಳು ಹಾಗೂ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.
ಬರಹ ಕೃಪೆ.
ಜಯಪಾಲ್ ಹೊಸಹಳ್ಳಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.