“ಅಪ್ಪು ಅಭಿಮಾನಿ ಬಳಗದಿಂದ ಬೇಲೂರು ತಾಲೂಕಿನ ಚೀಕನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಟೈ ಮತ್ತು ಬೆಲ್ಟ್ ವಿತರಣೆ.”
1 min read
ದಿನಾಂಕ 18/07/2023ರ ಮಂಗಳವಾರದಂದು ಅಪ್ಪು ಅಭಿಮಾನಿ ಬಳಗದಿಂದ ಬೇಲೂರು ತಾಲ್ಲೂಕಿನ ಚೀಕನಹಳ್ಳಿ ಸ .ಹಿ.ಪ್ರಾ ಶಾಲಾ ಮಕ್ಕಳಿಗೆ ಟೈ ಮತ್ತು ಬೆಲ್ಟ್ ಕೊಡುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ್ ಎಸ್ ಇವರು ವಹಿಸಿದ್ದು ಮಕ್ಕಳಿಗೆ ಸಮಾಜದ ಅರಿವನ್ನು ತಿಳಿಸಿಕೊಟ್ಟರು. ನಂತರ ಗಂಗೂರವರು ” ಮಕ್ಕಳಿಗೆ ದಿನನಿತ್ಯದ ಸ್ವಚ್ಚತೆ ಮತ್ತು ಆರೋಗ್ಯದ ಮಾಹಿತಿ ಮತ್ತು ಈ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ತಿಳಿಸಿಕೊಟ್ಟರು.
ಕಿಶೋರ್ ರವರು ಕಾರ್ಯಕ್ರಮದ ದಾನಿಗಳದ ಡಾಕ್ಟರ್ ಅನುಷ್ ವಿಜಯಲಕ್ಷ್ಮಿ ಇವರಿಗೆ ಶುಭಾಹಾರೈಸಿದರು,ನಂತರ ಝಿ ಕನ್ನಡ ಡಿ ಕೆ ಡಿ ಸಹ ನೃತ್ಯಗಾರರಾದ ಕಿಶೋರ್ ರವರಿಗೆ ಬಳಗದ ಹಾಗೂ ಶಾಲೆಯ ಪರವಾಗಿ ಗೌರವಿಸಲಾಯಿತು ನಂತರ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾ ಶಿಕ್ಷಕರು ಅಪ್ಪು ಅಭಿಮಾನಿ ಬಳಗದ ಈ ಮಹತ್ತರ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ನಂತರ ಎಲ್ಲಾ
ಮಕ್ಕಳಿಗೆ ಟೈ & ಬೆಲ್ಟ್ ವಿತರಿಸಿ ಸಿಹಿ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಹಾಗೂ ಅಪ್ಪು ಅಭಿಮಾನಿ ಬಳಗದ ರಮೇಶ್ ಎಸ್ ಚಂದ್ರಾಪುರ , ಡಾ ಅನುಷ್ , ಗಂಗೂ ವೆಂಕಪ್ಪ ಚಿನ್ನಿಗಾ,ಕಿಶೋರ್ ಕುಮಾರ್,ಆದರ್ಶ,ಸುಹಾನ ,ವಿಜಯಲಕ್ಷ್ಮಿ M B ಮೂಡಿಗೆರೆ ಹಾಗೂ ಸರ್ಕಾರಿ ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಪರೋಕ್ಷವಾಗಿ ಸಹಕರಿಸಿದ ಉಪಾಧ್ಯಕ್ಷ,ಸುಭೇಷ್ ಬೇಲೂರು ಮತ್ತು ಕಾರ್ಯದರ್ಶಿ ಅಶೋಕ್. ಸಹಕಾರ್ಯದರ್ಶಿ ಜಯಶೀಲಾ ಗೌಡ ಮೈಸೂರ್, ಖಜಾಂಚಿ ಶ್ರೀನಿವಾಸ್ ಮಾಕೋನಹಳ್ಳಿ ಹಾಗೂ ಬಳಗದ ಸರ್ವ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಲಾಯಿತು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.