“ಮಲೆನಾಡ ಮಡಿಲಿನಲ್ಲಿ ನಡೆಯುತ್ತಿದೆ ಅಪರಾಧಗಳ ಹೆಚ್ಚಳ.”
1 min read
ಹಾನುಬಾಳು ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣ ಹೆಚ್ಚುತ್ತಲೇ ಸಾಗುತ್ತಿರುವುದು ಕಂಡು ಬಂದಿದೆ.
ಹಾನುಬಾಳು ಪ್ರದೇಶದಲ್ಲಿ ಬೆಂಗಳೂರು ನಿವಾಸಿಗಳು ಮೋಜು ಮಸ್ತಿ ಮಾಡಲಿಕ್ಕಾಗಿ ಬಂದಿದ್ದರು.
ಅಲ್ಲಿಂದ ಅವರು ಅರಣ್ಯ ಪ್ರದೇಶದಲ್ಲಿ ತಮ್ಮ ವಾಹನಗಳನ್ನು ಆಫ್ ರೋಡ್ ರೇಸಿಂಗ್ ಪ್ರಾರಂಭ ಮಾಡಿದ್ದಾರೆ.
ಇದನ್ನು ಕಂಡ ಅರಣ್ಯ ಇಲಾಖೆ 10 ಜೀಪು ಹಾಗೂ ಅದರ ಮಾಲೀಕರ ಮೇಲೆ ಕೇಸು ದಾಖಲು ಮಾಡಿದೆ.
ಹಾನುಬಾಳು ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಹಾಗೂ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಅಪರಾಧಿ ಪ್ರಕರಣ ಹೆಚ್ಚುತ್ತಿರುವುದು ಕಂಡು ಬಂದಿದೆ.
2022 ನೇ ಸಾಲಿನಲ್ಲಿ 2 ಬಾರಿ ಕಾಡು ಕುರಿಯನ್ನು ಹತ್ಯೆ ಮಾಡಿರುವುದು ಕೂಡ ಬೆಳಕಿಗೆ ಬಂದಿತ್ತು.
ಕಳೆದ 15 ದಿನಗಳ ಹಿಂದೆ ಹುರುಡಿ ಬಳಿ ಕಾಫಿ ಎಸ್ಟೇಟ್ ನಲ್ಲಿ ಜೀತ ಪ್ರಕರಣ ಪತ್ತೆಯಾಗಿತ್ತು.ಎಮ್ಮೆಗೆ ಗುಂಡು ಹಾರಿಸಿದ ಪ್ರಕರಣ ರಾಜ್ಯದಲ್ಲಿ ಸುದ್ದಿ ಆಗಿತ್ತು.
ಹಾನು ಬಾಳು ಹೋಬಳಿಯ ಅರಣ್ಯದಲ್ಲಿ ಬೆಂಕಿ ಹತ್ತಿ ಕೊಂಡು ಅರಣ್ಯ ಇಲಾಖೆ ಅಧಿಕಾರಿಗಳನ್ನು ಬಲಿ ಪಡೆದಿತ್ತು.
ಇದೀಗ ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲಿದ್ದು ಇನ್ನಷ್ಟು ಅಪರಾಧ ಪ್ರಕರಣ ಹೆಚ್ಚುವ ಸಂಭವ ಇದೆ.
ಪ್ರವಾಸಿಗರು ಮಾದಕ ದ್ರವ್ಯಗಳನ್ನು ಈ ಪ್ರದೇಶಕ್ಕೆ ತರುತ್ತಿರುವುದು ಕೂಡ ಬೆಳಕಿಗೆ ಬಂದಿದೆ.ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸುವುದು ಒಳಿತು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.