“ದಲಿತ ಯುವಕನ ಮೇಲೆ ಹಲ್ಲೆ : ಮರು ತನಿಖೆಗೆ ಒತ್ತಾಯ.”
1 min read
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿ ಎಚ್ ಡಿ ತಮ್ಮಯ್ಯನವರ ಪರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು ಎಂಬ ಕ್ಷುಲ್ಲಕ ಕಾರಣಕ್ಕಾಗಿ ದಲಿತ ಸಮುದಾಯದ ಯುವಕ ಅರುಣ್ ಕುಮಾರ್ ಅವರ ಮೇಲೆ ಸ್ಥಳೀಯ ಮೇಲ್ಜಾತಿಯವರಾದ ಪುಟ್ಟರಾಜು. ಮಂಜು. ಮೋಹನ್. ಅವರುಗಳು ಕತ್ತಿಯಿಂದ ಹಲ್ಲೆ ನಡೆಸಿದ್ದರು. ಈ ಮೂವರು ಆರೋಪಿಗಳು ಬಿಜೆಪಿಯ ಕಾರ್ಯಕರ್ತರಾಗಿದ್ದು ಹಿಂದಿನ ದಲಿತ ದರ್ಜೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂವಿಧಾನ ಸಂರಕ್ಷಣ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಶಿವಮಣಿಧನ್. ಸಂಶೋಧಕರಾದ ಸಿದ್ದಾರ್ಥ ಜೋಶಿ ವೈದ್ಯರಾದ ಸೆಲ್ವಿಯ ಕರ್ಪುಗಂ. ಮತ್ತು ಸಂವಿಧಾನ ಸಂರಕ್ಷಣಾ ವೇದಿಕೆಯ ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ರಚಿಸಿ ಪ್ರಕರಣದ ಬಗ್ಗೆ ವರದಿ ತಯಾರಿಸಿದೆ.
ದಲಿತ ಸಮುದಾಯದ ಯುವಕನ ಮೇಲೆ ಮೇಲ್ಜಾತಿ, ಮೇಲ್ವರ್ಗದವರು ಮಾರಣಾಂತಿಕ ಹಲ್ಲೆ ನಡೆಸದ ಘಟನೆ ಚಿಕ್ಕಮಗಳೂರಿನ ಕಲ್ಯಾಣನಗರ ಬಡಾವಣೆಯಲ್ಲಿ ನಡೆದಿದ್ದು, ಈ ಘಟನೆ ಸಂಬಂಧ ಸಂತ್ರಸ್ತರಿಗೆ ನ್ಯಾಯ ಕೊಡಿಸುವಲ್ಲಿ ಪೋಲಿಸ್ ಇಲಾಖೆ ಸಂಪೂರ್ಣವಾಗಿ ವಿಫಲಾಗಿದೆ. ಈ ಹಲ್ಲೆಯ ಹಿಂದೆ ದಲಿತ ಸಮುದಾಯವನ್ನು ಒಕ್ಕಲೆಬ್ಬಿಸುವ ಹುನ್ನಾರ ಇತ್ತು. ಈ ಉದ್ದೇಶದಿಂದಲೇ ಮೇಲ್ಜಾತಿಯವರು ಹಲ್ಲೆಗೊಳಗಾದ ದಲಿತ ಯುವಕನ ಕುಟುಂಬ ಸೇರಿದಂತೆ ಬಡಾವಣೆಯಲ್ಲಿರುವ ನಾಲ್ಕು ದಲಿತ ಕುಟುಂಬಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂಬುದು ಸತ್ಯಶೋಧನೆಯಿಂದ ತಿಳಿದು ಬಂದಿದೆ ಎಂದು ಸಮಿತಿ ಆರೋಪಿಸಿದೆ.
ಘಟನೆ ಸಂಬಂಧ ಪೋಲಿಸರು ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದರೂ ಕೊಲೆ ಯತ್ನ ನಡೆಸಿದ ಆರೋಪಿಗಳ ವಿರುದ್ಧ 307 ಸೆಕ್ಷನ್ ದಾಖಲಿಸಿಲ್ಲ. ಆದ್ದರಿಂದ ಈ ಪ್ರಕರಣದ ಆರೋಪಿಗಳು ಬೇಲ್ ಪಡೆದುಕೊಂಡಿದ್ದಾರೆ ಎಂದರು.
ಸತ್ಯಶೋಧನ ಸಮಿತಿಯ ವರದಿಯನ್ನು ಬುಧವಾರ ಬಿಡುಗಡೆ ಮಾಡಿದ್ದು. ಈ ಪ್ರಕರಣದಲ್ಲಿ ಪೊಲೀಸರು ಮರು ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ. ಪ್ರಕರಣದ ತನಿಖೆಯಲ್ಲಿ ಲೋಪ ದೋಷ ಕಂಡುಬಂದಿದ್ದು ಈ ಸಂಬಂಧ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್ ವಕೀಲರು ನಮ್ಮ ವಾಹಿನಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಹೈಕೋರ್ಟ್ ವಕೀಲರಾದ ಶಿವಮಣಿಧನ್. ಸಂಶೋಧಕರಾದ ಸಿದ್ಧಾರ್ಥ ಜೋಷಿ. ವೈದ್ಯರಾದ ಸೆಲ್ವಿಯ ಕರ್ಪುಗಂ, ಕೃಷ್ಣಮೂರ್ತಿ ಹಾಗೂ ಹಲ್ಲೆಗೊಳಗಾದ ಅರುಣ್ ಕುಮಾರ್, ನೊಂದ ಕುಟುಂಬದ ಅಂತೋನಿ ಅಮ್ಮ ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.