लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವ ಜನತೆಗಾಗಿ ಕಾರ್ಯಗಾರ ನಡೆಸಲು ಚಿಂತನೆ : ಮೂಡಿಗೆರೆ ವೃತ್ತ ನೀರಿಕ್ಷಕ ಪಿ ಪಿ ಸೋಮೇಗೌಡ ಅಭಿಪ್ರಾಯ.”

1 min read

ದಿನಾಂಕ 14/07/2023ರ ಶುಕ್ರವಾರದಂದು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಎಸ್ ಎಸ್ಟಿ ಸಭೆಯನ್ನು ಕರೆದು ಮಾತನಾಡಿದ ಅವರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಕಾಪಾಡಲು ನಮ್ಮ ಇಲಾಖೆ ಸದಾ ಸಿದ್ಧವಿದೆ ನಿಮ್ಮೆಲ್ಲರ ಸಹಕಾರ ಸಹಭಾಗೀತ್ವ ಅಗತ್ಯ ಎಂದರು.

ಕಾನೂನು ಅರಿವಿನ ಬಗ್ಗೆ ಯುವ ಸಮುದಾಯವನ್ನು ಜಾಗೃತಿಗೊಳಿಸಲು ಕಾನೂನು ಅರಿವು ಕಾರ್ಯಕ್ರಮವನ್ನು ಪಂಚಾಯಿತಿ ಮಟ್ಟದಲ್ಲಿ ಸಂಘಟಿಸಲು ಪ್ರಯತ್ನಿಸಲಾಗುವುದು ಎಂದರು.

ಬಿ ಎಸ್ ಪಿ ಜಿಲ್ಲಾ ಸಂಯೋಜಕರು ಯು ಬಿ ಮಂಜಯ್ಯ ಮಾತನಾಡಿ ತಾಲ್ಲೂಕಿನಲ್ಲಿ ಕಂದಾಯ ಭೂಮಿ ಸಮಸ್ಯೆ ಹೆಚ್ಚಾಗಿದ್ದು ಬಹುತೇಕ ನಮ್ಮ ಸಮುದಾಯದಕ್ಕೆ ತುಂಬಾ ಅನ್ಯಾಯವಾಗುತ್ತಿದೆ ಎಂದರು ಅಲ್ಲದೆ ಇತ್ತೀಚಿಗೆ ದೌರ್ಜನ್ಯ ಕಾಯ್ದೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಆಗಾಗಿ ಇಂತಹ ಕೇಸುಗಳು ಬಂದಾಗ ಸಮಾಜದ ಮುಖಂಡರ ಗಮನಕ್ಕೆ ತಂದು ಪ್ರಕರಣ ದಾಖಲಿಸಬೇಕೆಂದರು.

ಬಿ ಎಸ್ ಪಿ ಜಿಲ್ಲಾ ಕಾರ್ಯದರ್ಶಿ ಪಿ ಕೆ ಮಂಜುನಾಥ್ ಮಾತನಾಡಿ ದೇವರಮನೆ ಪ್ರದೇಶ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಸಿ ಸಿ ಕ್ಯಾಮರ ಅಳವಡಿಸಬೇಕು ಎಂದರು.

ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ಸುರೇಂದ್ರ ಮಾತನಾಡಿ ಮೂಡಿಗೆರೆಯಲ್ಲಿ ಟ್ರಾಫಿಕ್ ವ್ಯವಸ್ಥೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಅದನ್ನು ಕೂಡಲೇ ಇಲಾಖೆ ಗಮನ ಹರಿಸಬೇಕೆಂದು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬಿ ಎಸ್ ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ಲೋಕವಳ್ಳಿ ಮಂಜುನಾಥ್, ಸಬ್ಲಿ ಮಂಜಯ್ಯ, ಗಿರೀಶ್, ಕಣಚೂರು ಸ್ಪಂದನ, ಕೋಳೂರು ಕುಮಾರ್, ಮೂಡಿಗೆರೆ ಠಾಣಾಧಿಕಾರಿ ಆದರ್ಶ, ಬಣಕಲ್ ಠಾಣಾಧಿಕಾರಿ ಜಂಬೂರಾಜ್ ಮಹಾಜನ್, ಗೋಣಿಬೀಡು ಠಾಣಾಧಿಕಾರಿ ಹರ್ಷ ಕುಮಾರ್, ಬಾಳೂರು ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ, ಪೊಲೀಸ್ ಸಿಬ್ಬಂದಿ ಹಾಂದಿ ಮಂಜುನಾಥ್ ಹಾಗೂ ಮುಂತಾದವರು ಇದ್ದರು.

ಬರಹ ಕೃಪೆ.

ಬಕ್ಕಿ ಮಂಜುನಾಥ್.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *