“ವೈವಿಧ್ಯಗಳ ಮಧ್ಯೆ ವೈರುಧ್ಯ.”
1 min read
ನಮ್ಮ ಮಲೆನಾಡಿನಲ್ಲಿ ಬ್ಯಾಟೆ ಅಂದ್ರೆ ಬಂದೂಕಿನಿಂದ ಮಾಡುವ ಶಿಕಾರಿ ಮಾತ್ರ ಅಲ್ಲ, ಗಾಳ, ಕೂಳಿ, ಬೆಸೆ, ಬಲೆ, ಇತ್ಯಾದಿ ಹತ್ತಾರು ಹತಾರಗಳ ಮೂಲಕ ಶಿಕಾರಿ ಮಾಡುತ್ತಾರೆ ಜೀವ ಜಗತ್ತಿನ ವಿಕಾಸದ ಪಥದಲ್ಲಿ ಮನುಷ್ಯನಿಗಿಂತ ಮೀನು ಮೊದಲು ಉಗಮವಾದದ್ದು, ಇಂತಹ ಮೀನುಗಳಲ್ಲಿ ಹತ್ ಮೀನು, ಬಾಳೆ ಮೀನು, ಮರ ಮೀನು, ಹಾಲುಮೀನು, ಕೊಚ್ಲಲಿ ಮೀನು, ಸೂಜಿ ಮೀನು, ತೊಳ್ಳೆ ಮೀನು ಇತ್ಯಾದಿ ಹಲವಾರು ಜಾತಿಯ ಮೀನುಗಳು ಮಲೆನಾಡಿನಲ್ಲಿ ಇವೆ, ಇಂದು ಇವು ಬೇರೆ ಬೇರೆ ಕಾರಣದಿಂದ ಅವಸಾನದ ಅಂಚಿಗೆ ಹೋಗಿವೆ, ಹತ್ ಮೀನಿಗೆ ನೆತ್ತಿ ಕಂಡಿ,ಇಳಿ ಮೀನಿಗೆ ಬುಡದ ಕಂಡಿ ಅಂತ ಗಾದೆ ಮಾತೊಂದಿದೆ, ಹತ್ ಮೀನು ಎಂಬ ಜಾತಿಯ ಒಂದು ಹೆಣ್ಣು ಮೀನು ನೀರಿನಿಂದ ಮೇಲೆ ಹಾರಿ ಹೋದರೆ, ಅದರ ಹಿಂದೆ ಹತ್ತಿಪ್ಪತ್ತು ಗಂಡು ಮೀನುಗಳು ತಮ್ಮಜೀವದ ಹಂಗು ತೊರೆದು ಆ ಹೆಣ್ಣು ಮೀನಿನ ಸಾಂಗತ್ಯಕ್ಕಾಗಿ ಅದರ ಹಿಂದೆ ಜಡೆಗಟ್ಟಿ ಹೋಗ್ತಾವೆ ಇದು ಜೀವ ವೈವಿಧ್ಯದಗಳ ಮಧ್ಯೆ ಇರುವ ವೈರುಧ್ಯ, ಇಂತಹ ಅಪಾರವಾದ ಪ್ರಾಕೃತಿಕ ಜ್ಞಾನ ಅಕ್ಷರವಂತರಲ್ಲದ ಮಲೆನಾಡಿನ ಬುಡಕಟ್ಟು ಜನಾಂಗಗಳಲ್ಲಿ ಅಗಾಧವಾಗಿ ಕಂಡು ಬರುತ್ತದೆ, ಇದು ಮಂಗನ ಬ್ಯಾಟೆಯ ಮಲೆನಾಡ ಪರಿಸರ ಕಥನದ ಸಾಲುಗಳು,ಇತ್ತೀಚೆಗೆ ಕುಂಭಕ ಓದುಗ ಬಳಗದ ವತಿಯಿಂದ, ಕಲ್ಕುಳಿ ವಿಠಲ್ ಹೆಗಡೆ ಅವರ ಈ ಪುಸ್ತಕ ಓದು ವಿಮರ್ಶೆ ಸಂವಾದಕ್ಕೆ ತೆರೆದುಕೊಂಡಿತು.
ಬರಹ ಕೃಪೆ.
ಡಿ.ಎಂ.ಮಂಜುನಾಥ ಸ್ವಾಮಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.