लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಂಗನ ಬ್ಯಾಟೆಗಾಗಿ ಮೊನ್ನೆ ಸಂಜೆ ಚಿಕ್ಕಮಗಳೂರು ಸಮೀಪದ ತಿರುಗುಣ ಗ್ರಾಮದ ಕಾಫಿ ಬೆಳೆಗಾರರು ಹಾಗೂ ತುರ್ತು ಪರಿಸ್ಥಿತಿಯ ಅ ಕಾಲದಲ್ಲಿ ಅದರ ವಿರುದ್ಧ ಧ್ವನಿ ಎತ್ತಿ ಜೈಲಿಗೆ ಹೋಗಿ ಬಂದ ತಿಮ್ಮೇಗೌಡರ ಮನೆಯಂಗಳದಲ್ಲಿ ಹತ್ತಾರು ಹಳ್ಳಿಗಳಿಂದ ಬಂದ ಕುಂಭಕ ಓದುಗ ಬಳಗದ ಸ್ನೇಹಿತರು ಒಂದೆಡೆ ಒಡಗೂಡಿದ್ದೆವು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತವಾದ ಈ ಮಂಗನ ಬ್ಯಾಟೆಯ ಪುಸ್ತಕದ ಕರ್ತೃ ಅಸಾಧಾರಣವಾದ ರಾಜಕೀಯ ಚಿಂತನೆಯನ್ನು ಹೊಂದಿರುವ ನಮ್ಮ ನಡುವಿನ ಜನಪರ ಹೋರಾಟಗಾರ ಕಲ್ಕುಳಿ ವಿಠ್ಠಲ್ ಹೆಗ್ಗಡೆ ಅವರು, ಇದೊಂದು ಪರಿಸರ ಕಥನ,,ಕಾಡಿನ ವೈವಿಧ್ಯಗಳ ಜೊತೆಗೆ,ಕಾಡನ್ನೇ ದೇವರೆಂದು ಪೂಜಿಸುವ, ಒಂದು ಶ್ರೀಮಂತ ಸಮುದಾಯದ ನೆಲಮೂಲದ ಸಂಸ್ಕೃತಿ ಮತ್ತು ಬೆರಗನ್ನು ಕಟ್ಟಿಕೊಡುವ ಹಂದರವನ್ನು ಹೆಣದಿರುವ ಶೂದ್ರ ಸಮುದಾಯದ ಕಥೆ ಇದು,ಈ ಪುಸ್ತಕ ಕನ್ನಡ ಭಾಷೆಯೊಳಗೆ ಕಾಣೆಯಾಗಿದ್ದ ಹಳೆಯ ಹಲವಷ್ಟು ಶಬ್ದಗಳೊಂದಿಗೆ ಮಲೆನಾಡಿನ ಜನಜೀವನವನ್ನು ರೋಚಕವಾಗಿ ಪರಿಚಯಿಸುತ್ತದೆ.

ನಮ್ಮಜಲ ನಮ್ಮನೆಲ ಎಂದು ಹೋರಾಡುತ್ತಿದ್ದ ಹಳ್ಳಿಯ ರೈತರು, ತಿಂದು ತೇಗಿ ಕೊಬ್ಬಿದ ಪೇಟೆ ಮಂಗಗಳನ್ನು ಯಾರೋ ಹಳ್ಳಿಗೆ ತಂದು ಬಿಟ್ಟ ಕಾರಣ, ಈ ಮಂಗಗಳ ಕಾಟ ತಡೆಯಲಾಗದೆ ತಾವು ಬದುಕಿ ಬಾಳಿದ ಊರು ಮತ್ತು ಕಾಡನ್ನು ಬಿಟ್ಟು ಬದುಕಿಗಾಗಿ ನಾಡಿಗಾಗಿ ಹೊರಟು ನಿಂತ ಕಥನವಿದು,ಇತ್ತೀಚೆಗೆ ಈ ಪುಸ್ತಕದ ಬಗ್ಗೆ ಓದು ವಿಮರ್ಶೆ ಸಂವಾದ ಕುಂಭಕ ಓದುಗ ಬಳಗವತಿಯಿಂದ ನಡೆಯಿತು.

ಬರಹ ಕೃಪೆ.

ಡಿ.ಎಂ.ಮಂಜುನಾಥ ಸ್ವಾಮಿ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *