“ಸತ್ಯ ಹೊರಬರಲಿ.”
1 min read
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ಯುವಕನೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರಕಿದ್ದು, ಮುಸ್ಲಿಂ ಮಹಿಳೆ ಮನೆಗೆ ಹೋಗಿದ್ದ ವೇಳೆ ಸಿಕ್ಕಿ ಬಿದ್ದ ಯುವಕನಿಗೆ ಹಲ್ಲೆ ನಡೆಸಿದ್ದು ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ.ಮನೆಯೊಂದರ ಕಪಾಟಿನೊಳಗೆ ಅಡಗಿ ಕುಳಿತಿದ್ದ ಯುವಕನನ್ನು ಹಲವಾರು ಯುವಕರು ಸೇರಿ ಹೊರಗೆ ಬರುವಂತೆ ಧಮ್ಕಿ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಮಹಿಳೆಯ ಮನೆಗೆ ಹೋದ ಕಾರಣ ಅಲ್ಲಿನ ಯುವಕರು ಸೇರಿ ಥಳಿಸಿದ್ದಾರೆನ್ನಲಾಗಿದೆ .
ಹಲ್ಲೆಗೊಳಗಾದ ಅಜಿತ್ ಎಂಬ ಯುವಕ ಐದಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿರೋದಾಗಿ ಆರೋಪಿಸಿದ್ದಾನೆ. ಹಂಝ, ಉಬೇದ್, ಹಿದ್ದು, ರಶೀದ್, ಸುಹೇಬ್ ಸೇರಿದಂತೆ ಹಲವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಾ ಅಜಿತ್ ಆರೋಪಿಸಿದ್ದಾರೆ.





ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆತ ಆರೋಪಿಸಿದ್ದು, ಕಾಂಗ್ರೆಸ್ ಸರ್ಕಾರ, ಎಂಎಲ್ ಎ ಬಂದ್ಮೇಲೆ ಈ ರೀತಿ ಆಗುತ್ತಿದೆ ಎಂದಿದ್ದಾರೆ.


ಆದರೆ ರಾತ್ರಿ ಮಹಿಳೆಯೊಬ್ಬರ ಮನೆಗೆ ಹೋದ ಯುವಕನನ್ನು ಹಿಡಿದು ಅಲ್ಲಿನ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.ಇದಕ್ಕೆ ಕೋಮು ಗಲಭೆಯ ಬಣ್ಣ ಬಳಿಯುವ ಪ್ರಯತ್ನ ಕೂಡ ನಡೆದಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






