“*ಮಳೆಗೆ ಮೊದಲ ಬಲಿಯಾದ ವೇಣುಗೋಪಾಲ್ ಕುಟುಂಬಕ್ಕೆ 24ಗಂಟೆಯ ಒಳಗೆ ಪರಿಹಾರ ಒದಗಿಸಿದ ನೂತನ ಶಾಸಕಿ ನಯನ ಮೋಟಮ್ಮ.*”
1 min read
ದಿನಾಂಕ 21/05/2023ರ ಭಾನುವಾರದಂದು ಧಾರಾಕಾರ ಮಳೆಗೆ ಮೂಡಿಗೆರೆ ತಾಲ್ಲೂಕಿನ ಚಿಕ್ಕಹಳ್ಳ ಗ್ರಾಮದ ಬಳಿ ಮಧುವನ ಹೋಂಸ್ಟೇ ಮಾಲಿಕ ವೇಣುಗೋಪಾಲ್ ಸ್ಕೂಟಿಯ ಮೇಲೆ ಮರ ಬಿದ್ದ ಪರಿಣಾಮ ಸಾವಿಗೀಡಾಗಿದ್ದರು.


ಈ ನಿಟ್ಟಿನಲ್ಲಿ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರೊಂದಿಗೆ ಮೂಡಿಗೆರೆ ನೂತನ ಶಾಸಕಿ ನಯನ ಮೋಟಮ್ಮ ಚರ್ಚಿಸಿದ್ದರು ಬಳಿಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವ ಹಿನ್ನೆಲೆ ಪರಿಹಾರ ಘೋಷಣೆಯಾಗಿದ್ದು, ದಿನಾಂಕ 23/05/2023ರ ಮಂಗಳವಾರದಂದು ಶಾಸಕಿ ನಯನ ಮೋಟಮ್ಮ ಅವರ ಅನುಪಸ್ಥಿತಿಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಲಾಗಿದೆ.

ಈ ಕಾರ್ಯವನ್ನು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಜಿ.ಸುರೇಂದ್ರ ಅವರು ಶ್ಲಾಘಿಸಿ ಮೂಡಿಗೆರೆ ಕ್ಷೇತ್ರದ ಹೆಮ್ಮೆಯ ಶಾಸಕಿ ನಯನ ಮೋಟಮ್ಮ ಎಂದು ಅಭಿನಂದನೆ ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.







