*”ಶ್ರದ್ಧಾಂಜಲಿ ವಾಹನ ಲೋಕಾರ್ಪಣೆ.”*
1 min read
ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದ ವತಿಯಿಂದಸಾರ್ವಜನಿಕ ಸೇವೆಗೆ ನೀಡಲಾದ ಶ್ರದ್ಧಾಂಜಲಿ ವಾಹನವನ್ನು ಬಣಕಲ್ ಬಾಲಿಕಾ ಮರಿಯ ಚರ್ಚಿನ ಧರ್ಮಗುರುಪ್ರೇಮ್ ಲಾರೆನ್ಸ್ ಡಿಸೋಜ ಭಾನುವಾರ ಚಾಲನೆ ನೀಡಿದರು.
ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ಮೆಲ್ವಿನ್ ಹರ್ಷ ಲಸ್ರಾದೊ ಮಾತನಾಡಿ,’ಶ್ರದ್ಧಾಂಜಲಿ ವಾಹನ’ವು ಸರ್ವ ಧರ್ಮದ ಜನರಿಗೂ ಅನುಕೂಲವಾಗಲಿದೆ.
ಬಣಕಲ್ ಸುತ್ತಮುತ್ತ ಹಾಗೂ ಮೂಡಿಗೆರೆ ತಾಲ್ಲೂಕಿನಾದ್ಯಂತ ಬಳಸಲು ರಿಯಾಯಿತಿ ದರದಲ್ಲಿ ವಾಹನ ನೀಡಲಾಗುವುದು. ವಾಹನದ ನಿರ್ವಹಣೆಗಾಗಿ ರಿಯಾಯಿತಿ ದರವನ್ನು ನಿಗದಿ ಪಡಿಸಲಾಗುತ್ತಿದೆ’ ಎಂದರು.ಧರ್ಮಗುರು ಲ್ಯಾನ್ಸಿ ಲೋಬೊ, ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.





