“ಶವ ಸಂಸ್ಕಾರ.”
1 min read
ದಿನಾಂಕ 11-05-2023 ರಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ಪಟ್ಟಣದ ಎಸ್.ಬಿ.ಐ ಬ್ಯಾಂಕಿನ ಮುಂಭಾಗ ಪ್ರಭಾಕರ (ಕೊಪ್ಪದ ನಿವಾಸಿ)ಎಂಬ ಅನಾಥ ವ್ಯಕ್ತಿ ಬಿದ್ದು ಗಾಯಗೊಂಡಿದ್ದು,ಕಾಫಿನಾಡು ಸಮಾಜ ಸೇವಕರಾದ ಹಸೈನಾರ್ ಬಿಳುಗುಳ ಮೂಡಿಗೆರೆಯ ಎಂ.ಜಿ.ಎಂ.ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12-05-2023 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.


ಇವರ ಮೃತದೇಹವನ್ನು 13/05/2023 ರಂದು ಮೂಡಿಗೆರೆ ಸಬ್ ಇನ್ಸ್ಪೆಕ್ಟರ್ ಆದರ್ಶ್, ದಫೇದಾರ್ ಮಂಜುನಾಥ್ ಮತ್ತು ಸಿಬ್ಬಂದಿ ವರ್ಗ,ಕಾಫೀನಾಡು ಸಮಾಜ ಸೇವಕರಾದ ಹಸೈನಾರ್ ಬಿಳಗುಳ ಹಾಗೂ ಸಮಾಜ ಸೇವಕರಾದ ಅಬ್ದುಲ್ ರೆಹಮಾನ್, ಆಂಬುಲೆನ್ಸ್ ಚಾಲಕರಾದ ಅಪ್ಪು, ಮಂಜುನಾಥ್, ಗಿರೀಶ್, ಗಿರೀಶ್ ಶೆಟ್ಟಿ, ಪುನೀತ್,ಇವರ ಸಹಕಾರದೊಂದಿಗೆ ಮೂಡಿಗೆರೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್ ಅವಿನ್ ಟಿವಿ.


