” ಈಶ್ವರಿ ಸಿರಿಗಂಧ ” ತಾಲೂಕಿಗೆ ಪ್ರಥಮ…..!!!
1 min read
2022 – 23ನೇ ಸಾಲಿನ ಎಸ್ .ಎಸ್ .ಎಲ್ .ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಬಣಕಲ್ ನ ಬಣಕಲ್ ಆಂಗ್ಲ ಮಾಧ್ಯಮ ಶಾಲೆಯ ಈಶ್ವರಿ ಸಿರಿಗಂಧ 625 ಅಂಕಗಳಿಗೆ 616 ಅಂಕಗಳನ್ನು ಪಡೆದು ಶೇಕಡಾ 99 ಫಲಿತಾಂಶದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.
ಇದೇ ಶಾಲೆಯ ಪ್ರಿಯಾಂಕಾ ಎಂಬ ವಿದ್ಯಾರ್ಥಿನಿ 625 ಅಂಕಗಳಿಗೆ 605ಅಂಕಗಳನ್ನ ಪಡೆದು ಶೇಕಡಾ 97 ಫಲಿತಾಂಶ ಹಾಗೂ ತಫಿಮಾ ಫಾತಿಮಾ ಎಂಬ ವಿದ್ಯಾರ್ಥಿನಿ 625 ಅಂಕಗಳಿಗೆ 597 ಅಂಕಗಳನ್ನು ಪಡೆದು ಶೇಕಡಾ 96 ಫಲಿತಾಂಶವನ್ನು ಪಡೆದಿರುತ್ತಾರೆ.


ಆಂಗ್ಲ ಮಾಧ್ಯಮದಲ್ಲಿ ಒಟ್ಟು 42 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 40 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 96 ಫಲಿತಾಂಶ ದಾಖಲಾಗಿದೆ. ಇದರಲ್ಲಿ
ಅತ್ಯುನ್ನತ ಶ್ರೇಣಿ – 10.
ಪ್ರಥಮ ಶ್ರೇಣಿ – 28.
ದ್ವಿತೀಯ ಶ್ರೇಣಿ – 2
ಇದೇ ಶಾಲೆಯ ಕನ್ನಡ ಮಾಧ್ಯಮ ವಿಭಾಗದಲ್ಲಿ ಒಟ್ಟು ಐವತ್ತಾರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 51 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 91 ಫಲಿತಾಂಶ ದಾಖಲಾಗಿದೆ. ಇದರಲ್ಲಿ….
ಅತ್ಯುನ್ನತ ಶ್ರೇಣಿ – 6.
ಪ್ರಥಮ ಶ್ರೇಣಿ – 32.
ದ್ವಿತೀಯ ಶ್ರೇಣಿ – 12.
ತೃತೀಯ ಶ್ರೇಣಿ – 1.
ಇದೇ ಶಾಲೆಯ ಕನ್ನಡ ಮಾಧ್ಯಮದಲ್ಲಿ ಮನು ಕುಮಾರ್ ಎಂಬ ವಿದ್ಯಾರ್ಥಿ 625 ಅಂಕಗಳಿಗೆ 578 ಅಂಕಗಳನ್ನು ಪಡೆದು ಶೇಕಡ 93 ಫಲಿತಾಂಶದೊಂದಿಗೆ ಕನ್ನಡ ಮಾಧ್ಯಮದಲ್ಲಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದು ವೀಕ್ಷಿತಾ ಎಂಬ ವಿದ್ಯಾರ್ಥಿನಿ 625 ಅಂಕಗಳಿಗೆ 531 ಅಂಕಗಳನ್ನು ಪಡೆದು 86 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ವರದಿ….
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್ ಅವಿನ್ ಟಿವಿ

