“ಮತ ಚಲಾಯಿಸಲು ಮನವೊಲಿಕೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ಹೋಬಳಿಯ ಮತ್ತಿಕಟ್ಟೆಯಲ್ಲಿ ದಿನಾಂಕ 03/05/2023ರ ಬುಧವಾರದಂದು ನಿರಾಶ್ರಿತರಿಗೆ ನಿವೇಶನ ಇದುವರೆಗೂ ದೊರೆತಿಲ್ಲವೆಂದು ನಿವೇಶನ ರಹಿತರು ಬಹಿಷ್ಕಾರ ಮಾಡಿದ್ದು,ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಮತ್ತು ಪ್ರಚಾರ ಪ್ರಮುಖರಾದ ಕೆ.ಸಿ.ರತನ್, ಬಿಜೆಪಿ ಪಕ್ಷದ ಬಣಕಲ್ ಹೋಬಳಿಯ ಅಧ್ಯಕ್ಷರಾದ ಅನು ಕುಮಾರ್ (ಪಟ್ಟದೂರು ಪುಟ್ಟಣ್ಣ),ಅಭಿಷೇಕ್ ಬಣಕಲ್, ಬಣಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸತೀಶ್ ಪೂಜಾರಿ ಹಾಗೂ ಬಿಜೆಪಿ ಪಕ್ಷದ ಬಣಕಲ್ ಹೋಬಳಿಯ ಮುಖಂಡರುಗಳು ನಮ್ಮ ಅಭ್ಯರ್ಥಿ ಗೆದ್ದರೆ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತಾರೆ ಎಂದು ಬಹಿಷ್ಕಾರ ಹಿಂಪಡೆಯುವಂತೆ ಮತ್ತು ಬಿಜೆಪಿಗೆ ಮತ ನೀಡುವಂತೆ ಮತಯಾಚನೆ ಮಾಡಿದರು.



ಇದಕ್ಕೆ ಒಪ್ಪಿದ ಮತ್ತಿಕಟ್ಟೆ ಗ್ರಾಮಸ್ಥರು ಬಹಿಷ್ಕಾರ ಹಿಂಪಡೆದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9458305990.

