“ಸಮಸ್ಯೆಗಳಿಗೆ ಹೋರಾಟವೇ ಪರಿಹಾರ.”
1 min read
ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಹ ಒಬ್ಬ ಬಿಸಿ ರಕ್ತದ ಯುವಕ ರಮೇಶ್ ಕೆಳಗೂರು ಅವರನ್ನು ನಮ್ಮ ಭಾರತೀಯ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಇವರನ್ನು ಮತದಾರ ಪ್ರಭುಗಳು ತಮ್ಮ ಅಮೂಲ್ಯ ಮತವನ್ನು ನೀಡುವ ಮೂಲಕ ಗೆಲ್ಲಿಸಿ ಎಂದು ಸಿ.ಪಿ.ಐ.ಪಕ್ಷದ ಮುಖಂಡರಾದ ಬಕ್ಕಡಿ ಲಕ್ಷ್ಮಣ್ ಕುಮಾರ್ ನಮ್ಮ ವಾಹಿನಿಯ ಮೂಲಕ ಮನವಿ ಮಾಡಿದರು.
ನಮ್ಮ ಪಕ್ಷದ ಅಭ್ಯರ್ಥಿ ಗೆದ್ದು ಶಾಸಕನಾಗಿ ಬಂದರೆ
ಮೊದಲ ಆದ್ಯತೆ
ಮತದಾರರ ವೇದಿಕೆ ನಿರ್ಮಾಣ,ಸಾರ್ವಜನಿಕ ದೂರು ಪೆಟ್ಟಿಗೆ ನಿರ್ಮಾಣ, ಭ್ರಷ್ಟಾಚಾರ ನಿರ್ಮೂಲನೆ ಜೊತೆಗೆ ಸರ್ಕಾರಿ ಕಾಮಗಾರಿಗಳ ಗುಣಮಟ್ಟ,ಖರ್ಚುವೆಚ್ಚಗಳ ತನಿಖೆ ಮತ್ತು ಸಮರ್ಪಕ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ,ಕಪ್ಪುಪಟ್ಟಿಯಲ್ಲಿರುವ ಗುತ್ತಿಗೆದಾರರಿಗೆ ಯಾವುದೇ ಸರ್ಕಾರಿ ಗುತ್ತಿಗೆಗಳು ಸಿಗದಂತೆ ಮಾಡುತ್ತೇವೆ ಎಂದರು.
ಮುಂದುವರಿದು ಹಾಲಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿಯವರು ಮಾಧ್ಯಮ ಹಾಗೂ ಪತ್ರಿಕೆಗಳ ಮೇಲೆ ನಿರ್ಬಂಧ ಹೇರುವಂತಹ ಕೆಲಸ ಮಾಡಿರುವುದು ಅವರಿಗೆ ನೈತಿಕತೆ ಇಲ್ಲ ಎಂಬುದನ್ನು ಲೋಕಕ್ಕೆ ಸಾರಿದಂತಾಗಿದೆ ಎಂದು ಶಾಸಕರ ವಿರುದ್ಧ ಗುಡುಗಿದರು.
ದಿನಾಂಕ 05/05/2023ರ ಶುಕ್ರವಾರದಂದು ನಡೆಯಲಿರುವ ಸಿ.ಪಿ.ಐ.ಪಕ್ಷದ ಸಾರ್ವಜನಿಕ ಬಹಿರಂಗ ಸಭೆ ಮತ್ತು ಕಾರ್ಮಿಕ ದಿನಾಚರಣೆ ನಡೆಯಲಿಕ್ಕಿದೆ,ಈ ಸಂದರ್ಭದಲ್ಲಿ ಸಿ.ಪಿ.ಐ.ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜನ್ ಭಾಗವಹಿಸಲಿದ್ದು ಮತದಾರರ ಬಂಧು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ AITUC ಸಘಟನೆಯ ಎನ್.ಸಿ.ಓಬಯ್ಯ,ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಉಪಾಧ್ಯಕ್ಷ ವಿಠ್ಠಲ್ ಇದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.