“ಕೈ”…..ಬಿಟ್ಟು “ತೆನೆ” ಹೊತ್ತ ಕಾಂಗ್ರೆಸ್ ಮುಖಂಡರು.
1 min read
ಕಾಂಗ್ರೆಸ್ ಪಕ್ಷವು ಬ್ರಿಟಿಷರ ಕಾಲದಿಂದಲೂ ಮೂಡಿಗೆರೆ ಕ್ಷೇತ್ರದಲ್ಲಿದೆ,ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯಕ್ಕೆ ಸ್ಪಂದಿಸುವ ಮತ್ತು ಕ್ಷೇತ್ರದ ಅಭಿವೃದ್ಧಿಗೆ ದುಡಿಯುವ ಪಕ್ಷ ಎಂದು ಸೇರ್ಪಡೆಗೊಂಡಿದ್ದೆ,ಆದರೆ ಪಕ್ಷದ ಸಿದ್ಧಾಂತಕ್ಕೆ ಅಲ್ಲಿರುವ ನಾಯಕರುಗಳು ಬದ್ಧರಾಗಿದ್ದಾರೆ, ಕಾಂಗ್ರೆಸ್ ಪಕ್ಷವು ದಲಿತ ಯುವಕರನ್ನು ಸೆಳೆಯಲು ಬಿಟ್ಟಿಲ್ಲ,ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯೋಚಿಸಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ನಾನು ಕೂಡ ಆಕಾಂಕ್ಷಿಯಾಗಿದ್ದೆ,ಸ್ಥಳೀಯ ಆಕಾಂಕ್ಷಿಗಳಿಗೆ ಪಕ್ಷದ ಟಿಕೆಟ್ ನೀಡುವಂತಹ ಕೆಲಸ ಆಗಿಲ್ಲ ಜೊತೆಗೆ ಅಭ್ಯರ್ಥಿಗಳ ಆಯ್ಕೆ ಯ ಪ್ರಕ್ರಿಯೆ ಕೂಡ ಹೈಕಮಾಂಡ್ ಸರಿಯಾಗಿ ಮಾಡಿಲ್ಲ,ಕಾಂಗ್ರೆಸ್ ಪಕ್ಷವು ಕುಟುಂಬ ರಾಜಕಾರಣದ ಫ್ಯಾಕ್ಟರಿಯಾಗಿದೆ ಎಂದು ಎಂ.ಸಿ.ಹೂವಪ್ಪ ಅವರು ಕಾಂಗ್ರೆಸ್ ಪಕ್ಷದ ಎಸ್.ಸಿ.ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿ ವಾಹಿನಿಯೊಂದಿಗೆ ಮಾತನಾಡಿದರು.
ಎನ್.ಆರ್.ಸಿ. ಮತ್ತು ಸಿ.ಎ.ಎ.ಕಾಯ್ದೆಯ ಬಗ್ಗೆ ಮಾಜಿ ಮಂತ್ರಿಗಳು ಕಾಂಗ್ರೆಸ್ ಪಕ್ಷದ ನಾಯಕಿಯವರಾದ ಮೋಟಮ್ಮನವರು ಚಕಾರ ಎತ್ತಲಿಲ್ಲ ಇದರಿಂದಾಗಿ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಅಸಮಾಧಾನವಿದೆ ಜೊತೆಗೆ ಸ್ವಾರ್ಥ ರಾಜಕಾರಣದ ಮೂಲ ಬೇರು ಕಾಂಗ್ರೆಸ್ ಪಕ್ಷದ ನಾಯಕಿ ಮೋಟಮ್ಮ ಎಂದು ಎಂ.ಸಿ.ಹೂವಪ್ಪ ಮೋಟಮ್ಮ ಅವರ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಪಕ್ಷದ ರಾಜಕೀಯ ಸಿದ್ಧಾಂತವೇ ನನಗೆ ಬೇಸರ ತಂದಿದೆ ಆದ್ದರಿಂದ ರೈತರ ಪರ ಕೆಲಸ ಮಾಡುವ ಮತ್ತು ಜಾತ್ಯತೀತ ನಿಲುವು ಹೊಂದಿರುವ ಜೆಡಿಎಸ್ ಪಕ್ಷ ಕ್ಕೆ ಮರಳಿ ಸೇರಿದ್ದೇನೆ ಎಂದರು.
ಎಂ.ಎಸ್.ಕೃಷ್ಣ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡ ಸಂದರ್ಭದಲ್ಲಿ ನಮ್ಮ ವಾಹಿನಿಯೊಂದಿಗೆ ಮಾತನಾಡುತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವು ಜಾತಿ ಆಧಾರಿತ ರಾಜಕೀಯ ಮಾಡುತ್ತಿದೆ.ಆದರೆ ಜೆಡಿಎಸ್ ಪಕ್ಷವು ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.
ಬಿಜೆಪಿಯಲ್ಲಿದ್ದು ಹಾಲಿ ಶಾಸಕರಾಗಿದ್ದ ಎಂ.ಪಿ.ಕುಮಾರ ಸ್ವಾಮಿಯವರು ಮೂಡಿಗೆರೆ ತಾಲ್ಲೂಕಿನ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ತಂದಿದ್ದರು ಆದರೆ ಅವರಿಗೆ ಕೆಲಸ ಮಾಡಲಿಕ್ಕೆ ಬಿಜೆಪಿ ಪಕ್ಷವು ಅವಕಾಶ ಕೊಡಲಿಲ್ಲ ಆದರೆ ಈ ಬಾರಿ ಜೆಡಿಎಸ್ ಪಕ್ಷವು ಒಂದು ಅವಕಾಶ ಕೊಟ್ಟಿದೆ,ನಾವೆಲ್ಲರೂ ಎಂ.ಪಿ.ಕುಮಾರಸ್ವಾಮಿಯವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಆಲ್ದೂರು ಹೋಬಳಿಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಬಿ.ಅಶೋಕ್ ಗೌಡ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡ ಸಂದರ್ಭದಲ್ಲಿ ನಮ್ಮ ವಾಹಿನಿಯೊಂದಿಗೆ ಮಾತನಾಡುತ್ತ ಕಾಂಗ್ರೆಸ್ ಒಂದು ಹಳೆಯ ಬಸ್ ಅದು ಖಾಲಿಯಾಗುತ್ತಿದೆ.
ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷವು ಯಾವುದೇ ರೀತಿಯ ಕೆಲಸ ಮಾಡಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ರಾಕೇಶ್, ಹೇಮಂತ್,ತೀರ್ಥಕುಮಾರ್,ದೇಜಪ್ಪ,ಅಬ್ಬಾಸ್ ಮುಂತಾದವರು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.