“ಗಜರಾಜನ ಆರ್ಭಟ.”
1 min readಸಕಲೇಶಪುರದ ಉದೇವಾರ ಹಾಗೂ ಕಲ್ಲಳ್ಳಿ ಮಧ್ಯೆ ರಸ್ತೆಯಲ್ಲಿ ಇಂದು ಆನೆಯೊಂದು ಬೈಕ್ ಸವಾರರ ಮೇಲೆ ದಾಳಿಗೆ ಯತ್ನ ಮಾಡಿದ ಘಟನೆ ವರದಿಯಾಗಿದೆ.

ದೀನೆ ಕೆರೆ ರಂಗಸ್ವಾಮಿ ಹಾಗೂ ಅವರ ಸ್ನೇಹಿತ ಗುಂಡ ಎಂಬವರು ಮಧ್ಯಾಹ್ನ 12.30 ಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಆನೆ ಅವರನ್ನು ಓಡಿಸಿ ಕೊಂಡು ಬಂದಿದೆ. ಸುಮಾರು 300 ಮೀಟರ್ ನಷ್ಟು ಆನೆ ಓಡಿಸಿ ಕೊಂಡು ಬಂದಿದೆ. ಆನೆಯ ವೇಗಕ್ಕೆ ಬೆದರಿದ ಅವರು ಬೈಕ್ ನ್ನು ರಸ್ತೆಯಲ್ಲಿ ಬಿಟ್ಟು ಓಡಿ ಹೋಗಿದ್ದಾರೆ.
ಈ ಮಧ್ಯೆ ರಂಗ ಸ್ವಾಮಿಯವರ ಕಾಲಿಗೆ ಬಹಳ ನೋವು ಉಂಟಾಗಿದೆ ಎಂದು ತಿಳಿದು ಬಂದಿದೆ. ಅವರು ಅಸ್ವಸ್ತರಾಗಿದ್ದಾರೆ.
ಈ ಪ್ರದೇಶದಲ್ಲಿ ಸುಮಾರು 30 ಕ್ಕೂ ಮೀರಿ ಆನೆಗಳು ಇವೆ ಎಂದು ಸ್ಥಳೀಯರಾದ ದಿನೇಶ್ ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.