ಮೂಡಿಗೆರೆ :ಹೆಣ್ಣು ಮನೆಯ ಸಂಸ್ಕಾರ. ತಾಳ್ಮೆಯ. ಸಹನೆ ಯ ಪ್ರತೀಕ. ಡಾ.ಮೋಹನ್ ರಾಜಣ್ಣ.
1 min readಮೂಡಿಗೆರೆ :ಹೆಣ್ಣು ಇದ್ದ ಮನೆಯ ತನುವು (ತಂಪಿನ ಸಂಕೇತ )ಹೆಣ್ಣು ಮನೆಯ ಸಂಸ್ಕಾರ ತಾಳ್ಮೆ ಸಹನೆಯ ಪ್ರತೀಕ ಎಂದು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಹೇಳಿದರು.
ಅವರು ಇಂದು ಜೇಸಿಐ ಗೋಣೀಬೀಡು ಹೊಯ್ಸಳ ಕಾರ್ಯಾಲಯ ದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸನ್ಮಾನಿಸಿ ಮಾತನಾಡಿದರು.
ಹೆಣ್ಣು ನ್ನು ಭೂತಾಯಿಗೆ ಹೋಲಿಸುವರು. ಮಕ್ಕಳಿಗೂ ಒಳ್ಳೆಯ ಸಂಸ್ಕಾರ ನೀಡುತ್ತಾ ಸಂಸಾರದ ಜವಾಬ್ದಾರಿಯ ಜೊತೆಗೆ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಮಹಿಳೆ ಪಾತ್ರ ಮಹತ್ವದ್ದು ಎಂದು ಹೇಳಿದರು..
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜೇಸಿಐ ಗೋಣಿಬೀಡು ಹೊಯ್ಸಳ ಅಧ್ಯಕ್ಷ ರಾದ ಯೋಗೇಶ್ ಕುಮಾರ್ ವಹಿಸಿ ಮಾತನಾಡುತ್ತಾ ಹೆಣ್ಣು ಜಗದ ಕಣ್ಣು. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಅಳಬಲ್ಲದು ಇಂತಹ ಮಹಿಳೆಯು ತನ್ನ ಜೀವನ ದಲ್ಲಿ ವಿವಿಧ ರೀತಿಯ ಪಾತ್ರ ನಿರ್ವಹಿಸಿ ಕುಟುಂಬ ಸಲಹುತ್ತಾಳೆ ಇಂತಹ ಮಹಿಳೆ ಯಾರನ್ನು ಗೌರವಿಸಬೇಕು ಎಂದರು.
ಅರೋಗ್ಯ ಇಲಾಖೆಯ ನರ್ಸ್ ಸುಶೀಲ ಮತ್ತು ಅಂಚೆ ಇಲಾಖೆಯ ಮಮತ ರವರನ್ನು ಸನ್ಮಾನಿಸಲಾಯಿತು. ಸುಶೀಲ ಮತ್ತು ಮಮತ ರವರು ಸನ್ಮಾನ ಸ್ವೀಕರಿಸಿ ಮಹಿಳೆಯಾರಿಗೆ ಸೂಕ್ತ ಅವಕಾಶ ದೊರೆತಾಗ ಪ್ರತಿಭೆ ಹೊರಹೊಮ್ಮಲು ಸಾಧ್ಯ ವಾಗುತ್ತದೆ. ಕುಟುಂಬ ಹಾಗು ಸಮಾಜ ನಿರ್ವಹಣೆ ಯಲ್ಲಿ ಮಹಿಳೆಯರಪಾತ್ರ ಮಹತ್ವದ್ದಗಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್. ಕಾರ್ಯದರ್ಶಿ ರಂಜಿತ್.ಪೂರ್ವಾಧ್ಯಕ್ಸ ರಾದ ವೈ ಬಿ ಸುಂದ್ರೇಶ್. ಗಣೇಶ್ ಗೌಡ.ಬಾಲಕೃಷ್ಣ. ವರುಣ್. ಪರಮೇಶ್. ದೇವರಾಜ್. ಸತ್ಯ ಕುಮಾರ್. ಭರತ್.. ಚಂದ್ರಶೇಖರ್. ಭರತ್. ಹಾಗು ಮುಂತಾದವರು