लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹವಾಮಾನ ಬದಲಾವಣೆಯ ಕುರಿತು ಚಿಕ್ಕಮಗಳೂರಿನಲ್ಲಿ ನಡೆದ ಕರ್ಯಾಗಾರ

1 min read
Featured Video Play Icon

ದಿ: 10/3/2022
ಚಿಕ್ಕಮಗಳೂರು : ಇಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಬಾರ್ಡ್ ವತಿಯಿಂದ ಹವಾಮಾನ ಬದಲಾವಣೆಯ ಕುರಿತು ಕರ್ಯಾಗಾರ ವನ್ನು ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತು..ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿಲಾಯಿತು, ನಂತರ ನಬಾರ್ಡ್ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕಿನ ಡಿ.ಡಿ.ಎಮ್ ಆದ ಪ್ರತಾಪ್ ರವರುಪ್ರಾಸ್ತಾವಿಕವಾಗಿ ಹವಾಮಾನ ವೈಪರಿತ್ಯದ ಬಗ್ಗೆ ಹಾಗೂ ನಬಾರ್ಡ್ ಬ್ಯಾಂಕಿನ ವಿವರಗಳನ್ನು ತಿಳಿಸಿದರು ,ನಂತರ ಸುರೇಶ್ ಎಲ್.ಡಿ.ಎಮ್ ಚಿಕ್ಕಮಗಳೂರು ಇವರು ಹವಮಾನದ ಏರು ಪೆರುಗಳನ್ನು ವಿವರಿಸಿದರು ನಂತರ
ಚಂದ್ರಶೇಖರ್ ಮೂಗುತಿಹಳ್ಳಿ ಪ್ರಗತಿಪರ ರೈತರಾದ ಇವರು ಸಾವಯವ ಕೃಷಿಯ ಮಹತ್ವವನ್ನು ವಿವರಿಸಿದರು ನಂತರ
ಶಬಾನಂ ಕೃಷಿ ವಿಜ್ನಾನ ಕೇಂದ್ರ ಪವನ ಶಾಸ್ತ್ರ ವಿಜ್ನಾನಿಗಳು ಮೂಡಿಗೆರೆ ಇವರು ಹವಾಮಾನದ ಸಪೂರ್ಣ ವಿವರಣೆಯನ್ನು ಪಿ.ಪಿ.ಟಿ ಪ್ರೆಸೆಂಟೇಶನ್ ಮೂಲಕ ಮಾಹಿತಿ ನೀಡಿದರು..ನಂತರ
ತಿರುಮಲ್ಲೆಷ್ ಜಂಟಿ ನಿರ್ದೇಶಕರು ಕೃಷಿ ಇಲಾಖೆ ಚಿಕ್ಕಮಗಳೂರು ಇವರು ಕೃಷಿಕ ಜನಾಂಗದವರಿಗೆ ಹವಾಮಾನ ಬದಲಾವಣೆ ಇಂದಾಗುವ ನಷ್ಟಗಳನ್ನು ತಿಳಿಸಿದರು ..
ಕಾರ್ಯಕ್ರಮದ ನಿರೂಪಣೆಯನ್ನು ವಾಯ್ಸ್ ಸಂಸ್ಥೆಯ ನಿ ಸಂತೋಷ್ ಹಾಗೂ ಎನ್.ಜಿ.ಓ ನವೀನ್ ಕುಮಾರ್ ನಿರ್ವಹಿಸಿದರು ,
ಕಾರ್ಯಕ್ರಮದಲ್ಲಿ ಅನೇಕ ಸಂಸ್ಥೆಗಳು, ಎನ್.ಜಿ.ಓ ಗಳು,ಸ್ವಯಂಸೇವಕರು,ಕೃಷಿ ಇಲಾಖೆಯ ಅಧಿಕಾರಿಗಳು,ಪಶು ಇಲಾಖೆ ಅಧಿಕಾರಿಗಳು,ಹವಾಮಾನ ಇಲಾಖೆಯಅಧಿಕಾರಿಗಳು,ವಿಜ್ನಾನಿಗಳು ಮತ್ತು ನಬಾರ್ಡ್ ನ ಡಿ.ಡಿ.ಎಮ್ ಪ್ರತಾಪ್,ಸಂತೋಷ್,ಪುನೀತ್,ನವೀನ್ ಕುಮಾರ್,ಪರಮೇಶ್,ವಿಜಯಲಕ್ಷ್ಮಿ ಉಪಸ್ತಿತರಿದ್ದರು.

ವರದಿ: ಮಗ್ಗಲಮಕ್ಕಿ ಗಣೇಶ್

About Author

Leave a Reply

Your email address will not be published. Required fields are marked *