ಕಳಸ :ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಣೆ.
1 min read
ಕಳಸ :ಸಮಾಜ ಹಾಗು ಮಾನವನ ಏಳಿಗೆ ಆಗಬೇಕಾದರೆ ಅದು ವಿಜ್ಞಾನ ದಿಂದ ಮಾತ್ರ ಸಾಧ್ಯ. ವಿಜ್ಞಾನ ವಿಲ್ಲದೆ ಯಾವುದೇ ಕಾರ್ಯ ವ್ಯವಸ್ಥಿತ ವಾಗಿ ಸಾಗಲಾರದು ಎಂದು ಕಳಸ ಪೊಲೀಸ್ ಠಾಣೆ ಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ. ಸಿ. ಆರ್. ಮೋಹನ್ ಕುಮಾರ್ ಹೇಳಿದರು.
ಅವರು ಇಂದು ಕಳಸ ಪಟ್ಟಣ ದ ಪ್ರಬೋಧಿನಿ ಶಾಲೆ ಯಲ್ಲಿ ಕಳಸ ತಾಲೋಕು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರವರು ಸಮಿತಿಯದಶಮಾನೋತ್ಸವ ಪ್ರಯುಕ್ತ ರಸಪ್ರಶ್ನೆ ಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನ ಹಾಗು ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು….
ವಿಜ್ಞಾನ ಬೆಳೆದಷ್ಟು ಸಮಾಜದ ಅಂಕು ಡೊಂಕು ಗಳು ನಾಶವಾಗುತ್ತವೆ. ಮನುಷ್ಯ ನಲ್ಲಿ ವೈಜ್ಞಾನಿಕ ಬೆಳವಣಿಗೆ ಹೆಚ್ಚಾಗಿ ನಮ್ಮಲ್ಲಿರುವ ಮೌಢ್ಯ ಮತ್ತು ಕಂದಾಚಾರ ಗಳು ದೂರ ಆಗುತ್ತವೆ ಎಂದರು.
ಕಳಸ ತಾಲ್ಲೂಕು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಗಣೇಶ್ ಕುಕ್ಕೋಡು ಮಾತನಾಡುತ್ತಾ ನಮ್ಮ ಜ್ಞಾನ ವಿಕಾಸ ವಾಗುತ್ತದೆ.. ವಿಜ್ಞಾನ ದ ಶಕ್ತಿ ಸದುಪಯೋಗ ಪಡಿಸಿ ಸಾಮಾಜಿಕ ಕ್ರಾಂತಿ ಮಾಡಬೇಕಿದೆ. ವಿಜ್ಞಾನ ಎಂಬ ಅರಿವನ್ನು ಉಂಟುಮಾಡಲು ತಾಲ್ಲೂಕು ಆದ್ಯಂತ ಸಂಘಟನೆ ಆಗಬೇಕಿದೆ ಎಂದರು.
ಪ್ರಬೋಧಿನಿ ವಿದ್ಯಾ ಸಂಸ್ಥೆ ಯ ಮುಖ್ಯ ಶಿಕ್ಷಕರು ಆನಂದ್ ಗುರೂಜೀ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮಾಡುತ್ತಿರುವ ಕೆಲಸ ಗಳು ಪ್ರಶಂಶನೀಯ ವಾದದ್ದು. ಮೂಡ ನಂಬಿಕೆ ಗಳು ಹಳ್ಳಿಗಳಲ್ಲಿ ದಟ್ಟವಾಗಿ ಬದುಕನ್ನು ಹಾಳು ಮಾಡುತ್ತಿವೆ ಅಂತವರಿಗೆ ವಿವೇಕ ವನ್ನು ಇಂತಹ ಸಂಸ್ಥೆ ಗಳು ಮಾಡಬೇಕಿದೆ ಎಂದರು.
ರಸಪ್ರಶ್ನೆ ಯಸಂಯೋಜಕ ಶಿಕ್ಷಕರಾದ ಸಂದೇಶ್ ಆಚಾರ್ಯ. ಶೃಂಗೇಶ್. ಚೇತನ್ ಸೀತಾರಾಮ್. ಶಿಕ್ಷಕಿ ಸೌಮ್ಯ. ಹರ್ಷಿತ. ವಿದ್ಯರ್ಥಿಗಳು ಗಳು ಭಾಗವಹಿಸಿದ್ದರು…