AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಾವೇರಿಯಲ್ಲಿ ಪಕ್ಷದ ಮುಖಂಡರ ನೇತೃತ್ವದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ#avintvcom

1 min read
Featured Video Play Icon

ಹಾವೇರಿ

“ಗ್ರಾಮ ಮಟ್ಟದಲ್ಲೂ ಬಿಜೆಪಿ ಗೆಲವು ಶತಸಿದ್ಧ”

ಹಾವೇರಿಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಗ್ರಾಮ ಸ್ವರಾಜ್ಯ’ ಸಮಾವೇಶವನ್ನು ಪಕ್ಷದ ಮುಖಂಡರ ನೇತೃತ್ವದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ದೇಶ ವಾಸಿಗಳ ಸೇವೆಗೆಂದೇ ಸ್ಥಾಪಿತವಾದ ಭಾರತೀಯ ಜನತಾ ಪಕ್ಷ, ಪ್ರಜೆಗಳ ಏಳಿಗೆಯನ್ನೇ ಬಯಸಿ ರಾತ್ರಿ-ಹಗಲೆನ್ನದೆ ಶ್ರಮಿಸುತ್ತಿದೆ. ಗ್ರಾಮಗಳು ಸ್ವರಾಜ್ಯವಾಗಬೇಕು  ಎಂಬುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಅವರ ಕನಸನ್ನು ಸಾಕಾರಗೊಳಿಸಲು ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ಗ್ರಾಮ ಮಟ್ಟದಲ್ಲೂ ಬಿಜೆಪಿ ವಿಜಯದ ಬೆಳಕನ್ನು ಬೆಳಗಿಸಿ, ಸರ್ಕಾರದ ಪ್ರತಿ ಯೋಜನೆಗಳು ಮನೆ-ಮನೆಗೂ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ದೇಶದ ಮೂಲೆಮೂಲೆಯಲ್ಲಿಯೂ ಅಭಿವೃದ್ಧಿಯ ಹೊಂಬೆಳಕನ್ನು ಹರಿಸಲಿದ್ದೇವೆ ಎಂದು ಹೇಳಿದರು.

ಸಮಾವೇಶದಲ್ಲಿ ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿ ಜಿ, ಶ್ರೀ ಬಿ.ಸಿ.ಪಾಟೀಲ್ ಜಿ, ಶ್ರೀ ಸಿ.ಸಿ.ಪಾಟೀಲ್ ಜಿ,  ಶ್ರೀ ಶಿವಕುಮಾರ ಉದಾಸಿ ಜಿ, ಶಾಸಕರಾದ ಶ್ರೀ ನೆಹರು ಓಲೆಕಾರ ಜಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ವಿ.ಸಂಕನೂರ ಜಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಎಂ. ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ದರಾಜು, ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಡಾ. ಸಂದೀಪ್ ಕುಮಾರ್, ಜಿಲ್ಲಾ ಅಧ್ಯಕ್ಷರಾದ ಶ್ರೀ ಸಿದ್ದರಾಜ ಕಲಕೋಟಿ ಹಾಗೂ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.

“गाव पातळीवरही भाजपाच विजय होणार ”

हावेरी येथे भाजपा पक्षाच्या वतीने आयोजित ‘ग्राम स्वराज्य’  समावेश मान्यवरांच्या नेतृत्वात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी उद्घाटन करून, कार्यक्रमास उद्देशून संबोधित केले.

देशातील रहिवाशांच्या सेवेसाठी स्थापन केलेली भारतीय जनता पार्टी नागरिकांच्या समृद्धीसाठी रात्रंदिवस काम करत आहे. महात्मा गांधींचे स्वप्न होते की गावे स्वराज्य व्हावे यासाठी त्यांचे स्वप्न साकार करण्यासाठी आम्ही सर्वांनी प्रयत्न करीत आहोत.  ग्रामीण पातळीवरही भाजपा विजयाचा झेंडा फडकावून, सरकाराचे प्रत्येक प्रकल्पांना घरोघरी पोहचविण्याचे काम करीत आहे. यामुळे देशाच्या कानाकोपऱ्यात विकास करण्यात येईल असे सांगितले.

यावेळी मंत्री श्री बसवराज बोम्मायी जी, श्री बी.सी. पाटील जी, खासदार श्री शिवकुमार उदासी जी, आमदार श्री नेहरू ओलेकार, विधानपरिषदेचे सदस्य श्री एस.वी. संकनूर, प्रदेश भाजपाचे उपाध्यक्ष श्री एम. राजेंद्र, प्रदेश युवा मोर्चाचे अध्यक्ष डॉ. संदीप कुमार, भाजपचे जिल्हाध्यक्ष श्री सिद्धराज कलकोटी, लोकप्रतिनिधी, आणि पक्षाचे कार्यकर्ते उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author