लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಮಖಂಡಿ ನಗರದ ರುದ್ರಸ್ವಾಮಿ ಪೇಠದಲ್ಲಿ ಶಾಸಕ ಆನಂದ ನ್ಯಾಮಗೌಡ ಮತ್ತು ಸಿದ್ದು ಮೀಶಿ ಅವರಿಗೆ ಸನ್ಮಾನ avintvcom

1 min read
Featured Video Play Icon

ಜಮಖಂಡಿ ನಗರದ ರುದ್ರಸ್ವಾಮಿ ಪೇಠದಲ್ಲಿ ಭೂಮಿ ಅಡಿಗಲ್ಲು ಸಮಾರಂಭ ಹಾಗೂ ಶಾಸಕ ಆನಂದ ನ್ಯಾಮಗೌಡ ಮತ್ತು ನೂತನ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ ಅವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಶಾಸಕ ಆನಂದ ನ್ಯಾಮಗೌಡ ಭೂಮಿ ಅಡಿಗಲ್ಲು ಪೂಜೆಯನ್ನು ನೇರವೆರಿಸಿದರು ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು. ದಲಿತ ಸಮುದಾಯದ ಅಭಿವೃದ್ಧಿಗೆ ಹಾಗೂ ಭೂ ಒಡೆತನವನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಪಕ್ಷ. ಅದರಂತೆ ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಸರಕಾರದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.22 ಮೀಸಲಾತಿ ಅನುದಾನದ ಬಜೆಟ್ ಹೆಚ್ಚಿಸಿದ್ದಾರೆ.
ಬಡಮಕ್ಕಳ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮಕ್ಕಳ ವಿದ್ಯಾಭ್ಯಾಸಕ್ಕೆ ಹೊಸ ಕಟ್ಟಡವನ್ನು ನಿರ್ಮಿಸಲು ಭೂಮಿ ಪೂಜೆ ನೇರವರಿಸಿರುವದು ಹೆಮ್ಮೆಯ ವಿಷಯವಾಗಿದೆ. ಎಲ್ಲರೂ ಶಿಕ್ಷದಿಂದ ಮುಂದೆ ಬಂದರೆ ಸಮಾಜ ಅಭಿವೃದ್ಧಿಯಾಗಲು ಸಾಧ್ಯ.
ಜಮಖಂಡಿ ನಗರ ಇತಿಹಾಸವನ್ನು ಹೊಂದಿದೆ.ನಮ್ಮ ತಂದೆಯವರ ಅವಧಿಯಲ್ಲಿ ದಲಿತ ಸಮುದಾಯದ ಪ್ರಾಧಿಕಾರದ ಅಧ್ಯಕ್ಷರಾಗಿದರು. ಅದರಂತೆ ಇವಾಗಲ್ಲೂ ಸಹ ನಗರಸಭೆಗೆ ಅಧ್ಯಕ್ಷ ಸ್ಥಾನವನ್ನು ಸಿದ್ದು ಮೀಶಿ ಅವರು ಆಯ್ಕೆಯಾಗಿದ್ದು ಸಮಾಜಕ್ಕೆ ಅಷ್ಷೇ ಅಲ್ಲ ನಗರಕ್ಕೆ ಹೆಮ್ಮೆಯವಾಗಿದೆ. ಬರುವ ದಿನಗಳಲ್ಲಿ ನಾವು ಮತ್ತು ಅವರು ಸೇರಿ ಜಮಖಂಡಿ ನಗರವನ್ನು ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಸಿದ್ದು ಮೀಶಿ ಮಾತನಾಡಿದರು.
ರುದ್ರಸ್ವಾಮಿ ಮಠದ ಸಹಜಾನಂದ ಅವಧೂತರು ಆರ್ಶೀವಚನ ನೀಡಿದರು. ಕೃಷ್ಣಾನಂದ ಅವಧೂತರು ಉಪಸ್ಥಿತರಿದ್ದರು.ಮತ್ತು ಓಣಿಯ ಪ್ರಮುಖರು ಇದ್ದರು.
ಬಾಯಟ್ಸ್. ಶಾಸಕ ಆನಂದ ನ್ಯಾಮಗೌಡ.
ಬಾಯಟ್ಸ್ . ಸಹಜಾನಂದ ಅವಧೂತರು.
ಬಾಯಟ್ಸ್ .ನೂತನ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ.

About Author

More Stories

You may have missed